ADVERTISEMENT

ಬಡ್ತಿ ನೀಡಲು ವಿಳಂಬ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ 22.8.11 ರಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಲು ಅಗತ್ಯ ದಾಖಲಾತಿಗಳನ್ನು 15.9.11ರೊಳಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ನವೆಂಬರ್ 30 ರೊಳಗೆ ಆಕ್ಷೇಪಣೆಯನ್ನು ಸಹ ಸಲ್ಲಿಸುವಂತೆ ತಿಳಿಸಿತ್ತು. 

ಹೊಸ ವರ್ಷ ಆರಂಭವಾದರೂ ಬಡ್ತಿ ನೀಡುವ ಆದೇಶ ಹೊರಡಿಸುವ ಪ್ರಯತ್ನವನ್ನೇ ಇಲಾಖೆ ಮಾಡಿಲ್ಲ. ಅದಕ್ಕೆ ಏನು ಕಾರಣ ಎನ್ನುವುದೂ ಗೊತ್ತಾಗುತ್ತಿಲ್ಲ. ಎಷ್ಟು ಜನ ದಾಖಲಾತಿ ಒದಗಿಸಿದ್ದರೋ ಅವರಿಗೆ ಬಡ್ತಿ ನೀಡಿ ಇನ್ನೂ ಹುದ್ದೆಗಳು ಖಾಲಿ ಉಳಿದರೆ ಇನ್ನಷ್ಟು ದಾಖಲಾತಿ ಒದಗಿಸುವಂತೆ ಕಾಲಾವಕಾಶ ಕೊಡಬಹುದು. 

ಅನೇಕ ದೈಹಿಕ ಶಿಕ್ಷಕರು ಬಡ್ತಿಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಮತ್ತು ಇಲಾಖೆಯ ಆಯುಕ್ತರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.