ADVERTISEMENT

ಬದಲಾವಣೆ ಯಾವಾಗ?

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST

‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಅಂತ ಕನಕದಾಸರು ಹೇಳಿದ್ದು ಕೆಲವರಿಗಾದರೂ ನೆನಪಿರಬಹುದು. ಮನುಷ್ಯ ಏನಾದರೂ ಮಾಡುವುದೆಂದರೆ ಅದು ಹೊಟ್ಟೆಗೆ ಹಾಗೂ ಬಟ್ಟೆಗೆ. ಏನನ್ನೂ ಮಾಡದೆಯೇ ಹೊಟ್ಟೆಗೆ ಆಹಾರ, ಮೈಮುಚ್ಚಲಿಕ್ಕೆ ಬಟ್ಟೆಸಿಗುತ್ತದೆಂದಾದರೆ (ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಪಿಂಚಣಿ ಸಿಕ್ಕಿದಂತೆ) ಏನನ್ನಾದರೂ ಯಾರಾದರೂ ಏಕೆ ಮಾಡುತ್ತಾರೆ?

ನಮ್ಮ ಸರ್ಕಾರ ಬಡಜನರಿಗೆ ಹೊಟ್ಟೆ– ಬಟ್ಟೆಗಾಗಿ ಏನನ್ನಾದರೂ ಮಾಡಲು ವ್ಯವಸ್ಥೆ ಮಾಡುವ ಬದಲಿಗೆ ಏನನ್ನೂ ಮಾಡದೆ ಇರಲಿಕ್ಕಾಗಿ ನಿರುದ್ಯೋಗ ಭತ್ಯೆಯಂತೆ ಅಕ್ಕಿ ಇತ್ಯಾದಿ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ತೆರಿಗೆ ಹಣದಿಂದ ಉಚಿತವಾಗಿ ಕೊಡುತ್ತಿದೆ.

ಕಾಂಗ್ರೆಸ್ ಸರ್ಕಾರದ ಘೋಷಣೆ ‘ಗರೀಬಿ ಹಠಾವೊ’ ಎಂಬುದು. ಅಂದರೆ ಬಡತನದ ನಿರ್ಮೂಲನೆ. ಘೋಷಣೆ ಏನೋ ಚೆನ್ನಾಗಿದೆ. ಆದರೆ ಅನುಷ್ಠಾನ? ಬಡತನದ ನಿರ್ಮೂಲನೆ ಆದಾಗ ಅದರ ಸ್ಥಾನದಲ್ಲಿ ಸಿರಿವಂತಿಕೆ ಇರಬೇಕಲ್ಲವೇ? ಆದರೆ, ಉಚಿತವಾಗಿ ಒಂದಿಷ್ಟು ಅಕ್ಕಿ, ಬೇಳೆಗಳನ್ನು ಬಡವರಿಗೆ ಕೊಡುತ್ತಾ ಹೋದರೆ ಅವರು ಯಾವ ಕಾಲಕ್ಕೆ ಉದ್ಧಾರವಾಗಿ ಶ್ರೀಮಂತರಾಗುತ್ತಾರೆ? ಅವರು ಯಾವಾಗ ತಂದೆ– ತಾಯಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರುವಂತಾಗುತ್ತಾರೆ?

ADVERTISEMENT

-ಜಿ.ವಿ. ಗಣೇಶಯ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.