`ಬಯಲು ಬಹಿರ್ದೆಸೆಗೆ ನಿಷೇಧ ಚಿಂತನೆ' (ಪ್ರ.ವಾ., ಜು. 2). ರಾಮನಗರ ಜಿಲ್ಲಾ ಪಂಚಾಯಿತಿಯ ಈ ಚಿಂತನೆಯ ಸುದ್ದಿಯನ್ನೋದಿ ನಗು ಬಂತು; ಪ್ರಶ್ನೆಗಳೂ ಹುಟ್ಟಿದುವು: ಜನ ನಸುಕಿನಲ್ಲಿ ಅಥವಾ ಮುಸ್ಸಂಜೆ ಹೊತ್ತು ಬಯಲು ಕಡೆಗೆ ಹೋಗುವಾಗ ಪೊಲೀಸರು (ಹೊಂಚುಹಾಕಿ) ಅವರನ್ನು ಹಿಡಿದುಹಾಕುತ್ತಾರೊ ಅಥವಾ ಅವರು `ಬಹಿರ್ದೆಸೆ'ಗೆ ಕುಳಿತಿರುವಾಗ ಬಂಧಿಸುತ್ತಾರೊ?
ನಿಷೇಧಾಜ್ಞೆಯ ಉಲ್ಲಂಘನೆಗೆ ಏನು ಶಿಕ್ಷೆ? ನಿಷೇಧ ಜಾರಿಗೆ ಬಂದರೆ, ಮಲಬದ್ಧತೆಯಿಂದ ಬಳಲುವವರಿಂದ ಆಸ್ಪತ್ರೆಗಳು ತುಂಬಿ ತುಳುಕುವುದು ನಿಶ್ಚಿತ! ಅಂತೂ ಬಹಿರ್ದೆಸೆಗೆ ಹೋಗುತ್ತಲೆ ತೀವ್ರವಾಗಿ ಚಿಂತಿಸಬೇಕಾದ ವಿಚಾರ!
-ಸಿ.ಪಿ.ಕೆ., ಮೈಸೂರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.