ADVERTISEMENT

ಬಾಲಬಡುಕ ಪ್ರವೃತ್ತಿ ಸಲ್ಲದು

ರಾಜಶೇಖರ ಹಾದಿಮನಿ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಬಹುಮತ ಪಡೆದಿರುವ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಗುರುತರ ಹೊಣೆಗಾರಿಕೆ ಇದೆ. ಪತ್ರಿಕೆಯಲ್ಲಿ ಅಗ್ರಲೇಖನ ಬರೆಯುತ್ತಿರುವ ಅಂಕಣಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವೈಯಕ್ತಿಕವಾಗಿ ಶುಭಾಶಯ ಸಲ್ಲಿಸುತ್ತಿರುವುದನ್ನು ಓದುಗರು ಗಮನಿಸುತ್ತಿದ್ದಾರೆ.

ಇವರ ಬಾಲಬಡುಕ ಪ್ರವೃತ್ತಿ ಸಲ್ಲದು. ಅದು ಖಾಸಗಿಯಾಗಿರಲಿ. ಬುದ್ಧಿಜೀವಿಗಳೆನಿಸಿಕೊಂಡ ಪ್ರೊಫೆಸರು, ಸಾಹಿತಿಗಳು ಈ ಕೆಲಸ ಮಾಡಲು ಬೇರೆ ವೇದಿಕೆ ಹಂಚಿಕೊಳ್ಳಬೇಕು. ಅಧಿಕಾರಕ್ಕಾಗಿ ಇವರು ಅವರ ಬಾಲಂಗೋಚಿ  ಆಗಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.