ADVERTISEMENT

ಬಿಸಿಯೂಟ ಹೊಣೆ ಶಿಕ್ಷಕರಿಂದ ಪ್ರತ್ಯೇಕಿಸಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ತುಮಕೂರು ಜಿಲ್ಲೆಯೊಂದರಲ್ಲಿಯೇ ಸು ಮಾರು 153 ಸರ್ಕಾರಿ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ ಎನ್ನುವ ಪ್ರಜಾವಾಣಿ ವರದಿ (ಜೂನ್1) ಓದಿ ಕೆಲ ಪ್ರಜ್ಞಾವಂತರಾದರೂ ಆತಂಕಕ್ಕೀಡಾಗಿರಬಹುದು.

ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗಲು ಇಂಗ್ಲಿಷ್ ವ್ಯಾಮೋಹವೇ ಕಾರಣ. ಈಗಿನ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆ ಕಲಿಕೆ ಅನಿವಾರ್ಯವಾಗಿದೆ.
ಬಿಸಿ ಊಟದಂತಹ ಯೋಜನೆಗಳು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಪೋಷಕರನ್ನು ಪ್ರೇರೇಪಿಸುವುದಿಲ್ಲ ಮತ್ತು ಪ್ರೇರೇಪಿಸಬಾರದು.

ಇಂಥ ಯೋಜನೆಗಳು ಶಿಕ್ಷಣಕ್ಕೆ ಪೂರಕವಾಗಿರಬೇಕೆ ಹೊರತು ಅದೇ ಮುಖ್ಯವಾಗಬಾರದು. ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತದೆ ಅನ್ನಬೇಕೆ ಹೊರತು ಒಳ್ಳೆಯ ಊಟ ಸಿಗುತ್ತೆ ಅನ್ನುವಂತಾಗಬಾರದು! ಮೊದಲು ಈ ಬಿಸಿ ಊಟದ ಯೋಜನೆಯಿಂದ ಶಿಕ್ಷಕರನ್ನು ಪ್ರತ್ಯೇಕಿಸಬೇಕು.
 
ಮತ್ತು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು.
ಒಟ್ಟಾರೆ ಶಿಕ್ಷಕರುಗಳನ್ನು ಶಿಕ್ಷಣೇತರ ಚಟುವಟಿಕೆಗಳಿಂದ ಮುಕ್ತಗೊಳಿಸುವ ಜೊತೆಗೆ ಇತರೆ  ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳದ ಹೊರತು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.