
ಪ್ರಜಾವಾಣಿ ವಾರ್ತೆಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಮಂದಿಗೆ ಹಲವು ಇಲಾಖೆಗಳ ಬಿಲ್ಲುಗಳನ್ನು ಪಾವತಿ ಮಾಡುವ ಅನುಕೂಲವನ್ನು `ಬೆಂಗಳೂರು ಒನ್~ ಮೂಲಕ ಜಾರಿಗೊಳಿ ಸಲಾಯಿತು.
ಒಂದೇ ಸೂರಿನ ಕೆಳಗೆ ಹಲವು ಇಲಾಖೆಗಳ ಬಿಲ್ಲುಗಳನ್ನು ಕಟ್ಟುವ ಸೌಲಭ್ಯ ತುಂಬಾ ಒಳ್ಳೆಯ ನಾಗರಿಕ ಸೌಲಭ್ಯ. ಇದರಿಂದ ಸಾರ್ವಜನಿಕರಿಗೆ ಕೂಡ ತುಂಬಾ ಉಪಯೋಗ ವಾಗಿದೆ. ಆದರೆ `ಬೆಂಗಳೂರು ಒನ್~ನಲ್ಲಿ ನೀಡುವ ರಸೀದಿಗಳಲ್ಲಿ ರಾಜ್ಯ ನುಡಿಯಾದ ಕನ್ನಡಕ್ಕೆ ಎಡೆ ಇಲ್ಲ. ಇದು ಕನ್ನಡಿಗರಿಗೆ ತೊಂದರೆ ತಂದಿದೆ.
ಈಗ ಎಲ್ಲವೂ ಇಂಗ್ಲಿಷಿನಲ್ಲಿ ಇರುವುದರಿಂದ ಕನ್ನಡವೊಂದೇ ಬಲ್ಲವರಿಗೆ ಬಿಲ್ಲಿನ ಮಾಹಿತಿ ಅರ್ಥವಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.