ADVERTISEMENT

ಬೆಲೆ ಏರಿಕೆಯ ಬಿಸಿ

ಉದಯ ಪ್ರಭು
Published 12 ಮೇ 2015, 19:30 IST
Last Updated 12 ಮೇ 2015, 19:30 IST

ಬೇಸಿಗೆಯಲ್ಲಿ ಬಿದ್ದ ಜೋರು ಮಳೆ ಕಾರಣ ದೇಶದ ಅನೇಕ ಕಡೆ ಫಸಲಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ ಆಹಾರ ಧಾನ್ಯಗಳ ಬೆಲೆ  ವೇಗವಾಗಿ ನೆಗೆಯುತ್ತಿದೆ. ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಲೋಕಸಭೆ ಚುನಾವಣೆ ಸಮಯದಲ್ಲಿ  ನರೇಂದ್ರ ಮೋದಿ ಅವರು ಬೆಲೆ ಏರಿಕೆಯನ್ನು ತಡೆಗಟ್ಟುವುದಾಗಿ ಭರವಸೆ ನೀಡಿದ್ದರು. ‘ಒಳ್ಳೆಯ ದಿನ’ ಬರುತ್ತದೆ ಎಂಬ ಕನಸು ಬಿತ್ತಿದ್ದರು. ಆದರೆ ಅಂಥ ದಿನಗಳು ಬರುವ ಸಾಧ್ಯತೆ ಕಾಣಿಸುತ್ತಿಲ್ಲ.

ಆ ಕನಸು ನನಸಾಗಬೇಕಾದರೆ ಬೇಳೆಕಾಳುಗಳ ಬೆಲೆ ಏರಿಕೆ ತಡೆಗಟ್ಟಲು ಬಿಗಿ ಕ್ರಮ ಕೈಗೊಳ್ಳುವುದು ಅನಿ ವಾರ್ಯ.   ಧಾನ್ಯದ ಅಕ್ರಮ ಸಂಗ್ರಹ ತಪ್ಪಿಸಬೇಕು. ಅಗತ್ಯವಿದ್ದರೆ ಆಮದು ಮಾಡಲು ತೀರ್ಮಾನ ಕೈಗೊಳ್ಳಬೇಕು. ಬೆಲೆ ಏರಿಕೆಯ ಬಿಸಿ ತಪ್ಪಿಸಿದರೆ ಅದೇ ಮಹಾಭಾಗ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.