ADVERTISEMENT

ಬ್ಯಾರಿ ನಿರ್ದೇಶಕರು ಉತ್ತರಿಸಲಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

2011ನೇ ವರ್ಷದ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆದಿರುವ `ಬ್ಯಾರಿ~ ಚಿತ್ರ ವಿವಾದಕ್ಕೆ ಗ್ರಾಸವಾಗಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಕೃತಿ ಚೌರ್ಯದ ಆರೋಪ ಎದುರಿಸುತ್ತಿರುವ ಚಿತ್ರದ ನಿರ್ದೇಶಕರು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾದಂಬರಿಕಾರ್ತಿ ಸಾ.ರಾ. ಅಬೂಬಕ್ಕರ್ ಅವರ `ಚಂದ್ರಗಿರಿಯ ತೀರದಲ್ಲಿ~ ಕಾದಂಬರಿಯನ್ನು ರಾಜ್ಯ ಸಾಹಿತ್ಯಾಸಕ್ತರು ಓದಿದ್ದಾರೆ. ಚಿತ್ರ ಬಿಡುಗಡೆಯಾದರೆ ನಿರ್ದೇಶಕರ `ಕಳ್ಳತನ~ ಬೆಳಕಿಗೆ ಬಂದೇ ಬರುತ್ತದೆ. ಈ ಕೃತಿಯನ್ನು ಬಳಸಿಕೊಂಡು ಸಿನಿಮಾ ಮಾಡಿದ್ದರೆ ಅದನ್ನು ಒಪ್ಪಿಕೊಳ್ಳುವ ಸೌಜನ್ಯವನ್ನು ನಿರ್ದೇಶಕರು ತೋರಬೇಕು 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.