ADVERTISEMENT

ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಅಗತ್ಯವೇ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಇತ್ತೀಚೆಗೆ ನಮ್ಮೂರಿನ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಊಟದ ಸಮಯದಲ್ಲಿ ಸಂಘಟಕರು ನನ್ನನ್ನು ಕರೆದು `ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದೇವೆ. ನೀವು ಅಲ್ಲಿಗೆ ಬರಬೇಕು~ ಎಂದರು.

ನಾನು ಒಪ್ಪಲಿಲ್ಲ. ಸಾರ್ವಜನಿಕ ಭೋಜನವನ್ನು ಮಾಡಿದೆ. ಈಗ ಒಂದು ಪ್ರಶ್ನೆ, ದೇವಸ್ಥಾನದಲ್ಲಿ ಅಥವಾ ಜಾತ್ರೆ ಇತ್ಯಾದಿ ಧಾರ್ಮಿಕ ಸಮಾರಂಭದಲ್ಲಿ ಬ್ರಾಹ್ಮಣರಿಗೆಂದು ಪ್ರತ್ಯೇಕ ಭೋಜನ ವ್ಯವಸ್ಥೆಯನ್ನು ಮಾಡುವುದು ಯಾಕೆ? ಇದರ ಅಗತ್ಯ ಇದೆಯೇ? ಈ ಕಂಪ್ಯೂಟರ್ ಯುಗದಲ್ಲೂ ಇಂತಹ ಅಸಂಬದ್ಧ ಆಚರಣೆಗಳು ಮುಂದುವರಿಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದನ್ನು ಬ್ರಾಹ್ಮಣರಾದರೂ ವಿರೋಧಿಸಬಾರದೇ?

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.