ADVERTISEMENT

ಭಕ್ತರಿಗೆ ಅಪಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಕನಕಪುರ ರಸ್ತೆಯಲ್ಲಿ ಬನಶಂಕರಿ ದೇವಾಲಯದವರೆಗೂ ಮೆಟ್ರೊ ಕೆಲಸ ಸಾಗುತ್ತಿದೆ. ದೇಗುಲದ ಹತ್ತಿರ ದೊಡ್ಡ ಗುಂಡಿಗಳಿವೆ. ಇದರಲ್ಲಿಯೇ ಭಕ್ತಾದಿಗಳು ಹೋಗಬೇಕು.

ಇತ್ತೀಚೆಗೆ ಸಾರಿಗೆ ಸಚಿವರು ಭೇಟಿ ಇತ್ತಿದ್ದರು. ಇದು ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ.
ಅದಕ್ಕಾಗಿ ಸಾರಕ್ಕಿ ಸಿಗ್ನಲ್‌ನಿಂದ ಬನಶಂಕರಿ ಸಿಗ್ನಲ್‌ವರೆಗೆ ತಾತ್ಕಾಲಿಕವಾಗಿ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಬೇಕು.

ಮೋನೋ ಟೈಪ್, ಕುಮಾರಸ್ವಾಮಿ, ಇಸ್ರೊ ಬಡಾವಣೆ ಮೂಲಕ ವಾಹನ ಸಂಚರಿಸುವಂತೆ ಮಾಡಬೇಕು.

ಇದರಿಂದ ಹಬ್ಬದ ಸಮಯದಲ್ಲಿ ಬರುವ ಭಕ್ತರು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ. ಕೂಡಲೇ ಬಿಎಂಟಿಸಿ ಈ ಬಗ್ಗೆ ಗಮನ ಹರಿಸಲಿ. ಮಾರಾಟಗಾರರನ್ನು ನಿಷೇಧಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.