
ಪ್ರಜಾವಾಣಿ ವಾರ್ತೆಭವಿಷ್ಯನಿಧಿ ಪಿಂಚಣಿ ಯೋಜನೆ 1995 ನೇ ನವೆಂಬರ್ನಲ್ಲಿ ಪ್ರಾರಂಭವಾಗಿದ್ದು ಅದನ್ನು ಇದುವರೆಗೂ ಪರಿಷ್ಕರಿಸಿಯೇ ಇಲ್ಲ. ಇದಾದ ನಂತರ ಎರಡು ವೇತನ ಪರಿಷ್ಕರಣೆಯಾಗಿದ್ದರೂ ಇದನ್ನು ಮಾತ್ರ ಕೇಂದ್ರ ಸರ್ಕಾರ ಮರತೇಬಿಟ್ಟಂತಿದೆ.
ಈ ಪಿಂಚಣಿಯ ಗರಿಷ್ಠ ಮೊತ್ತ 2000 ರೂಪಾಯಿಯನ್ನೂ ದಾಟಿಲ್ಲ. ನೌಕರರು ನಿವೃತ್ತಿಯಾದ ಮೇಲೆ ಕಂಪೆನಿಯಿಂದ ಸವಲತ್ತುಗಳೂ ಇರುವುದಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಗಳೂ ಸೇರಿದಂತೆ ಎಲ್ಲ ವರ್ಗದ ಇ ಪಿ ಎಫ್ ಪಿಂಚಣಿದಾರರದೂ ಇದೇ ಕಥೆ.
ವಾಸ್ತವ ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಸರ್ಕಾರ ಈ ಪಿಂಚಣಿಯನ್ನು ಪುನರ್ಪರಿಶೀಲಿಸಿ, ಈ ಯೋಜನೆಗಾಗಿ ಭವಿಷ್ಯ ನಿಧಿಯಲ್ಲಿ ಮೊದಲೇ ಹಣ ನೀಡಿದ ನೌಕರರ ಹಿತವನ್ನು ಕಾಯುವ ಬಗೆಗೆ ಗಮನಹರಿಸುವುದು ಅವಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.