ರಾಜ್ಯದ ನಾನಾ ಕಡೆ
ಆಯಿತು ಭ್ರಷ್ಟರ ಬೇಟೆ
ಮತ್ತೊಮ್ಮೆ ಛಿದ್ರವಾಯಿತು
ಕೆಲ ನುಂಗಣ್ಣರ ಕೋಟೆ
ಈ ನಮೂನೆಯ ಬೇಟೆ
ಘಟಿಸುತ್ತಿದ್ದರೆ ನಿರಂತರ
ನುಂಗಣ್ಣರ ಎದೆಗಳು
ನಡುಗುವವು ಥರ ಥರ
ಜತೆಗೆ ರಂಗ ಪ್ರವೇಶ
ಮಾಡಲು ಹೊಸ ನುಂಗಣ್ಣರಲ್ಲಿ
ಮೂಡುವುದು ಹೆದರಿಕೆ
ಹೀಗಾಗಿ ಸಮಾಜದಲ್ಲಿ
ಭ್ರಷ್ಟತೆಯ ಪ್ರಮಾಣ
ಆದೀತು ಸಾಕಷ್ಟು ಇಳಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.