ಪಕ್ಷಾಂತರ ನಿಷೇಧ ಕುರಿತ ಆಕಾರ್ ಪಟೇಲ್ ಲೇಖನ (ಪ್ರ.ವಾ., ಮೇ 21) ಸಮಯೋಚಿತ. ಕರ್ನಾಟಕದ ಈಗಿನ ಪರಿಸ್ಥಿತಿ ವಿಚಿತ್ರವಾಗಿದೆ. ನಾವು ಒಂದು ಪಕ್ಷವನ್ನು ವಿರೋಧಿಸಿ ಇನ್ನೊಂದು ಪಕ್ಷಕ್ಕೆ ಮತ ನೀಡಿದ್ದೇವೆ. ಆದರೆ ಈಗ ಎರಡು ಪ್ರಮುಖ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದೆ. ಹಾಗಾದರೆ ನಮ್ಮ ಮತಕ್ಕೆ ಏನು ಬೆಲೆ?
ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವ ಹಕ್ಕು ಕೊನೇಪಕ್ಷ ಶಾಸಕರಿಗಾದರೂ ಇರಬೇಕು. ಅಂತೆಯೇ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಶಾಸಕರನ್ನು ವಾಪಸು ಕರೆಸಿಕೊಳ್ಳುವ ಅವಕಾಶ ಕೂಡ ಇರಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.