ವಿಪರೀತ ಮಳೆಯಾಗಿ ಅವಘಡ ಸಂಭವಿಸಿದಾಗ ‘ವರುಣನ ಅವಕೃಪೆ, ಮಳೆಯ ಅಬ್ಬರ, ಮಳೆಗೆ ಬಲಿ’ ಎಂದೆಲ್ಲ ದೊಡ್ಡ ಸುದ್ದಿಯಾಗುತ್ತದೆ. ಆದರೆ ಮಳೆಯಿಂದ ಸಾವು- ನೋವಾದರೆ ಅದಕ್ಕೆ ಕಾರಣ ನಮ್ಮ ಸರ್ಕಾರವೇ ವಿನಾ ಮಳೆಯಲ್ಲ.
ನೀರು ಹರಿಯುವ ಜಾಗವನ್ನು ಅತಿಕ್ರಮಣ ಮಾಡಿ, ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಬದಲು ಅಂಥವರಿಗೆ ಪ್ರೋತ್ಸಾಹ ನೀಡಿದ ಸರ್ಕಾರವೇ ಎಲ್ಲ ಅನಾಹುತಗಳಿಗೆ ನೇರ ಹೊಣೆ. ಅಕ್ರಮ- ಸಕ್ರಮ ಯೋಜನೆಯ ಅನ್ವಯ ಒತ್ತುವರಿದಾರರಿಂದ ದಂಡ ವಸೂಲಿ ಮಾಡಿ ಬೀಗಿದ ಸರ್ಕಾರಕ್ಕೆ ಹೋದ ಜೀವಗಳನ್ನು ಮರಳಿ ತರುವ ಶಕ್ತಿ ಇದೆಯೇ?
ಪಿ.ಜೆ.ರಾಘವೇಂದ್ರ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.