ADVERTISEMENT

ಮೊದಲು ಸೌಲಭ್ಯ ಒದಗಿಸಿ

ಪ್ರೊ.ನಾರಾಯಣಸ್ವಾಮಿ, ತುಮಕೂರು
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಸಿದ್ದರಾಮಯ್ಯನವರ ಬಜೆಟ್ ಮಂಡನೆ ಅಲ್ಪ ತೃಪ್ತಿ ತಂದರೂ; ಹದಿನೈದು ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆಯ ಪ್ರಸ್ತಾವ ಗಾಬರಿಯದಾಗಿದೆ. ಇರುವ ಕಾಲೇಜುಗಳಲ್ಲಿ ಕುಡಿಯುವ ನೀರು, ವಸತಿ, ಶೌಚಾಲಯ, ಗ್ರಂಥಾಲಯಗಳಿರಲಿ, ಬೋಧಕ ಸಿಬ್ಬಂದಿ ಯನ್ನೂ ಕಾಣಲಾಗದೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸಿ, ಕಾಲೇಜುಗಳು ನಡೆಯುತ್ತಿವೆ.

ಜೊತೆಗೆ ಇರುವ ಅಲ್ಪಸ್ವಲ್ಪ ಉಪನ್ಯಾಸಕರು ಆಯಕಟ್ಟಿನ ಅನುಕೂಲ ಸ್ಥಳದಲ್ಲಿ, ಕೆಲಸ ಇರಲಿ, ಇಲ್ಲದಿರಲಿ, ಪರಿಸರ ಅಧ್ಯಯನ; ಮತ್ತಿತರ ಸಬೂಬಿನಲ್ಲಿ ಕಾಲ ತಳ್ಳುವುದು ವಾಡಿಕೆಯಾಗಿದೆ. ಹೀಗಿರುವಾಗ ಮತ್ತೂ ಹದಿನೈದು ಕಾಲೇಜು ತೆರೆದು, ವಿದ್ಯಾರ್ಥಿಗಳಿಗೆ ವರವಾಗುವುದರ ಬದಲಿಗೆ ಭಾರವಾಗಬಾರದು. ಮೊದಲು ಸೌಲಭ್ಯ, ಸುಧಾರಣೆಯ ನಂತರ ಹೊಸ ಯೋಜನೆ ಕೈಗೆತ್ತಿಕೊಂಡರೆ ಎಲ್ಲರಿಗೂ ಕ್ಷೇಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.