ADVERTISEMENT

ರೈತಸಂಘ ಸ್ಪರ್ಧಿಸಲಿ

ಎಂ.ಶಿವಯೋಗಯ್ಯ ಕಲ್ಮನೆ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಎಚ್‌.ಎಸ್‌. ರುದ್ರಪ್ಪ, ಎಂ.ಡಿ. ನಂಜುಂಡಸ್ವಾಮಿ, ಎನ್‌.ಡಿ. ಸುಂದರೇಶ್‌ ಅವರನ್ನೊಳಗೊಂಡಿದ್ದ ರೈತ ಸಂಘ ಕರ್ನಾಟಕದಲ್ಲಿ ದೊಡ್ಡ ಸಂಘಟನೆಯಾಗಿತ್ತು.

ರೈತರೇ ಹೆಚ್ಚಾಗಿರುವ ಈ ದೇಶದಲ್ಲಿ, ಈಗ ರೈತರಿಗಾಗಿ ಒಂದು ರಾಜಕೀಯ ಪಕ್ಷವಿಲ್ಲದಂತಾಗಿದೆ. ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದವರೆಲ್ಲಾ ಒಟ್ಟಾಗಿ, ರೈತ ಸಂಘದಡಿಯಲ್ಲಿ ಸ್ಪರ್ಧಿಸಲಿ. ಆ ಮುಖಾಂತರ ರೈತರ ಧ್ವನಿ ಎಲ್ಲೆಲ್ಲೂ ಕೇಳಿಸುವಂತಾಗಲಿ.

ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್‌, ಕೆ.ಟಿ. ಗಂಗಾಧರ್‌, ಎಚ್‌.ಆರ್‌. ಬಸವರಾಜಪ್ಪ, ವೀರೇಶ್‌ ಸೊಬರದಮಠ, ಕುರುಬೂರು ಶಾಂತಕುಮಾರ್‌, ಬಾಬಾಗೌಡ ಎಸ್‌. ಪಾಟೀಲ್‌ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿ ಎಂಬುದು ಬಹಳ ಜನರ ಬಯಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.