
ಪ್ರಜಾವಾಣಿ ವಾರ್ತೆಬೆಲೆಯೂ ಇಲ್ಲದೆ
ಬೆಂಬಲವೂ ಇಲ್ಲದೆ
ಒಲವು ಛಲವೂ ಇಲ್ಲದೆ
ಬದುಕಲು ಬಲವೂ ಇಲ್ಲದೆ
ಸೋತು ಸುಣ್ಣವಾಗಿ
ಕುಸಿದು ಕಂಗಾಲಾಗಿ
‘ವಿಷ’ವನ್ನೆ ಉಣ್ಣುತ್ತಿಹರು
ನೇಗಿಲಯೋಗಿ ಎಂಬ ರೈತರು
ಓ ರೈತ ಬಂಧು, ಅನ್ನದಾತ
ಬೇಡ ಇಷ್ಟೊಂದು ಅಸಹನೆ
ಇರಲಿ ಇನ್ನೂ ಒಂದಷ್ಟು ಸಹನೆ
ನಿನ್ನಗಲಿಕೆಯಿಂದ ಸ್ಮಾರಕವಾಗುತ್ತದೆ
ಅಷ್ಟೆ, ನಿನ್ನಕ್ಕರೆಯ ಅರಮನೆ
‘ಸಾವು’ ಸಮಸ್ಯೆಗೆ ಪರಿಹಾರವಲ್ಲ
ಈಸಬೇಕು ಈಸಿ ಜೈಸಬೇಕು
ಜೈಸಿ ಬಾಳ ಬೆಳಗಬೇಕು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.