ADVERTISEMENT

ರೈಲು ಭಾಗ್ಯ

ನರಸಪ್ಪ ಖಾನಾಪುರ, ರಾಯಚೂರು
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಸರಿಯಾದ ಸಮಯಕ್ಕೆ ಮಳೆ-ಬೆಳೆಯಿಲ್ಲದೆ, ಹೊಟ್ಟೆ ತುಂಬಿಸಿಕೊಳ್ಳಲು ರಾಯಚೂರು, ಯಾದಗಿರಿ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಿಂದ  ಬೆಂಗಳೂರಿಗೆ ಪ್ರತಿದಿನ ಸಾವಿರಾರು ಜನ ಗುಳೆ ಹೊರಡುತ್ತಾರೆ.

ಇದರಿಂದ ರೈಲು ಗಾಡಿಗಳಲ್ಲಿ 4-5 ಬೋಗಿಗಳು ಕಿಕ್ಕಿರಿದು ತುಂಬಿರುತ್ತವೆ. ಪುರುಷರು 5-6 ಗಂಟೆ ನಿಂತುಕೊಂಡು, ಶೌಚಾಲಯಗಳಲ್ಲಿ ಕುಳಿತುಕೊಂಡು ಬಂದ ನಿದರ್ಶನಗಳು ಅದೆಷ್ಟೋ. ಇನ್ನು ಮಹಿಳೆಯರ ಪರಿಸ್ಥಿತಿ, ಕಂದಮ್ಮಗಳ ಚೀರಾಟ ಕೇಳತೀರದು.


ಹೀಗಾಗಿ ಪ್ರಯಾಣಿಕರು ಆತಂಕದಿಂದಲೇ ಪ್ರಯಾಣಿಸುವಂತಾಗಿದೆ. ಆದ್ದರಿಂದ ಬೆಂಗಳೂರಿನಿಂದ-ಬೀದರ್‌ಗೆ ಪ್ಯಾಸೆಂಜರ್ ರೈಲು ಓಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT