ADVERTISEMENT

ಲೇಖನ, ಮಾಹಿತಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST

2018ರ ಫೆಬ್ರುವರಿಯಿಂದ 2019ರ ಜನವರಿವರೆಗಿನ ಅವಧಿಯು ಸಸ್ಯ ವಿಜ್ಞಾನಿ, ಬಹುಮುಖ ಪ್ರತಿಭೆಯ ಡಾ. ಬಿ.ಜಿ.ಎಲ್. ಸ್ವಾಮಿಯವರ ಶತಮಾನೋತ್ಸವ ವರ್ಷವಾಗಿದೆ.

ಈ ಸಂದರ್ಭದಲ್ಲಿ, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅವರ ಬಿಡಿ ಲೇಖನಗಳನ್ನು ಒಂದೆಡೆ ತಂದು, ಪುಸ್ತಕ ರೂಪದಲ್ಲಿ ಪ್ರಕಟಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಅನೇಕ ಲೇಖನಗಳು ಸಿಕ್ಕಿವೆ. ಇನ್ನೂ ಹಲವು ಲೇಖನಗಳು ಸಿಗಬೇಕಾಗಿವೆ.

ಯಾರ ಬಳಿಯಾದರೂ ಸ್ವಾಮಿಯವರ ಲೇಖನವಿರುವ ಪತ್ರಿಕೆ, ಲೇಖನದ ಹಸ್ತಪ್ರತಿ ಅಥವಾ ಅವರ– ಅವರು ತೆಗೆದಿರುವ ಛಾಯಾಚಿತ್ರಗಳಿದ್ದರೆ ದಯವಿಟ್ಟು ತಿಳಿಸಬೇಕಾಗಿ ವಿನಂತಿ. ಅಂಥ ಲೇಖನ, ಹಸ್ತಪ್ರತಿ ಅಥವಾ ಛಾಯಾ ಚಿತ್ರಗಳ ಪ್ರತಿಗಳನ್ನು ಪಡೆದುಕೊಂಡು ಪ್ರಕಟಣೆಯಲ್ಲಿ ಬಳಸಿಕೊಳ್ಳಲಾಗುವುದು.

ADVERTISEMENT

ಹಾಗೆಯೇ ಅನೇಕ ಸಂಸ್ಥೆಗಳು ಡಾ. ಸ್ವಾಮಿಯವರ ಶತಮಾನೋತ್ಸವವನ್ನು ಆಚರಿಸಿವೆ. ಅದರ ವರದಿಯನ್ನು ಸಂಪರ್ಕ ವಿಳಾಸದೊಂದಿಗೆ ಇ–ಮೇಲ್ ಮಾಡಿದರೆ ಅವನ್ನು ದಾಖಲಿಸಲಾಗುವುದು. ಈ ಕಾರ್ಯದಲ್ಲಿ ಕನ್ನಡಿಗರೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇವೆ.

ಮೊಬೈಲ್‌ ಸಂಖ್ಯೆ: 9845362956, ಇ– ಮೇಲ್‌: gnnarasimha@gmail.com

-ಡಾ. ಟಿ.ಆರ್. ಅನಂತರಾಮು, ಡಾ. ಎಸ್.ಎಲ್. ಶ್ರೀನಿವಾಸಮೂರ್ತಿ, ಜಿ.ಎನ್. ನರಸಿಂಹಮೂರ್ತಿ, ಪ್ರೊ. ಕೆ.ಎಸ್. ಮಧುಸೂದನ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.