ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ, ಮಾಜಿ ಸಂಸದೆ, ಕಾಂಗ್ರೆಸ್ನ ಚುನಾವಣಾ ಸ್ಪರ್ಧಿ ಕರುಣಾ ಶುಕ್ಲಾ ‘ಬಿಜೆಪಿಯಲ್ಲಿ ವಾಜಪೇಯಿ, ಅಡ್ವಾಣಿ ಯುಗ ಅಂತ್ಯಗೊಂಡಿದೆ’ ಎಂದು ನೊಂದು ನುಡಿದಿದ್ದಾರೆ! ಅಷ್ಟೇಕೆ ಬಿಜೆಪಿಯ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಷಿ ಅಂತಹವರೂ ಮೂಲೆಗುಂಪಾಗಿದ್ದಾರೆ!
ಒಂದು ಕಾಲದಲ್ಲಿ ಬಿಜೆಪಿಯ ಆದರ್ಶದ ಮುಖವಾಗಿ ವಾಜಪೇಯಿ, ವಾಸ್ತವದ ಮುಖವಾಗಿ ಅಡ್ವಾಣಿ ಇದ್ದರು! ಇವರಿಬ್ಬರ ಬುದ್ಧಿಮತ್ತೆ, ಶ್ರಮದ ಫಲವಾಗಿ ಬಿಜೆಪಿ ಆರು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರಾರೂಢವಾಗಿತ್ತು. ದೇಶದಲ್ಲಿ ಬಿಜೆಪಿ ಬೆಳೆದು ಉಳಿದಿರುವುದು ಇವರಿಬ್ಬರಿಂದ.
ಇಂದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತೆ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿರುವುದು ಪಕ್ಷಕ್ಕೆ ಶುಭ ಸೂಚನೆಯಂತೂ ಅಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.