ADVERTISEMENT

ವಾಜಪೇಯಿ ‘ಯುಗಾಂತ್ಯ’!

ನಾಗಾರ್ಜುನ ಸಾಗ್ಗೆರೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ, ಮಾಜಿ ಸಂಸದೆ,  ಕಾಂಗ್ರೆಸ್‌ನ ಚುನಾವಣಾ ಸ್ಪರ್ಧಿ ಕರುಣಾ ಶುಕ್ಲಾ ‘ಬಿಜೆಪಿಯಲ್ಲಿ ವಾಜ­ಪೇಯಿ, ಅಡ್ವಾಣಿ ಯುಗ ಅಂತ್ಯಗೊಂಡಿದೆ’ ಎಂದು ನೊಂದು ನುಡಿದಿದ್ದಾರೆ! ಅಷ್ಟೇಕೆ ಬಿಜೆಪಿಯ ಹಿರಿಯ ನಾಯ­ಕರಾದ  ಸುಷ್ಮಾ  ಸ್ವರಾಜ್‌, ಮುರಳಿ ಮನೋಹರ ಜೋಷಿ ಅಂತಹವರೂ ಮೂಲೆ­ಗುಂಪಾಗಿದ್ದಾರೆ!

ಒಂದು ಕಾಲದಲ್ಲಿ ಬಿಜೆಪಿಯ ಆದರ್ಶದ ಮುಖ­ವಾಗಿ ವಾಜಪೇಯಿ, ವಾಸ್ತವದ ಮುಖವಾಗಿ ಅಡ್ವಾಣಿ ಇದ್ದರು! ಇವರಿಬ್ಬರ ಬುದ್ಧಿಮತ್ತೆ, ಶ್ರಮದ ಫಲವಾಗಿ ಬಿಜೆಪಿ ಆರು ವರ್ಷಗಳ ಕಾಲ ಕೇಂದ್ರ­ದಲ್ಲಿ ಅಧಿಕಾರಾರೂಢವಾಗಿತ್ತು. ದೇಶದಲ್ಲಿ ಬಿಜೆಪಿ ಬೆಳೆದು ಉಳಿದಿರುವುದು ಇವರಿಬ್ಬರಿಂದ.

ಇಂದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತೆ ಅಡ್ವಾಣಿ ಅವರನ್ನು ಮೂಲೆ­ಗುಂಪು ಮಾಡಿ­ರುವುದು ಪಕ್ಷಕ್ಕೆ ಶುಭ ಸೂಚನೆ­ಯಂತೂ ಅಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.