ADVERTISEMENT

ಶಿಕ್ಷಕಿಯರನ್ನು ಶಿಕ್ಷಿಸಬೇಕೇ?

ಡಾ.ಸಿ.ಆರ್.ಚಂದ್ರಶೇಖರ್
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಶಿಕ್ಷಕರು ಬೈದರೆಂದು ನೆಪ ಹೇಳಿ, ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿ­ಕೊಂಡರು. ‘ಆ ಶಿಕ್ಷಕಿ­ಯರಿಗೆ ಶಿಕ್ಷೆ ಕೊಡಿ, ಶಾಲೆಯನ್ನು ಮುಚ್ಚಿಸಿ’ ಎಂದು ದುಃಖತಪ್ತ ತಂದೆ–ತಾಯಿಗಳು ಮತ್ತು ಇತರರು ಶಾಲೆಯ ಮುಂದೆ ಬಾಲಕಿಯರ ಶವವಿಟ್ಟು ಪ್ರತಿಭಟನೆ ಮಾಡಿದರು. ‘ಪರೀಕ್ಷಾ ಸಮಯದಲ್ಲಿ ಹೋಳಿ ಆಡಿ ಸಮಯ ವ್ಯರ್ಥ ಮಾಡಬೇಡಿ’ ಎಂದಷ್ಟೇ ನಾವು ಹೇಳಿದ್ದು ಎಂದು ಶಾಲೆಯ ಆಡಳಿತ­ದವರು ಹೇಳಿದ್ದಾರೆ.

ಈ ಪ್ರಕರಣ ಇತ್ತೀಚೆಗೆ ಮಕ್ಕಳಲ್ಲಿ ಬೆಳೆ­ಯು­ತ್ತಿರುವ ಆತ್ಮಹತ್ಯಾ ಪ್ರವೃತ್ತಿಯ ಉದಾಹರಣೆ. ಈ ಪ್ರವೃತ್ತಿಗೆ ಕಾರಣಾಂಶಗಳನ್ನು ಜನ ಚಿಂತಿ­ಸ­ಬೇಕು ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು. ತಂದೆ ತಾಯಿ–ಪಾಲಕರ ಲಾಲನಾ–ಪಾಲನಾ ಕ್ರಮ, ತಾವು ಬಯಸಿದ್ದೆಲ್ಲ ಸಿಗಬೇಕು. ಸಿಗದೇ ನಿರಾಶೆಯಾದಾಗ ಏನು ಮಾಡಬೇಕು.

ಆತ್ಮ­ಹತ್ಯೆ ಮಾಡಿಕೊಳ್ಳಬೇಕೆಂಬ ಧೋರಣೆ ಅಲ್ಲೇ ಹುಟ್ಟುತ್ತದೆ. ವಿದ್ಯಾರ್ಥಿ ಜೀವನದ ಶಿಸ್ತನ್ನು ಪಾಲಿಸಲು, ಅಮಾನವೀಯತೆಯಿಂದ ವರ್ತಿ­ಸುವ ಶಾಲಾ ವ್ಯವಸ್ಥೆ, ವಿಪರೀತ ಸ್ಪರ್ಧೆ–ಪರೀಕ್ಷಾ ನಿರ್ವಹಣೆಯೇ ಯೋಗ್ಯತೆಗೆ ಮಾಪನ ಎಂದು ಹೇಳುವ ವ್ಯವಸ್ಥೆ, ಆತ್ಮಹತ್ಯಾ ಪ್ರಕರಣ­ಗಳನ್ನು ವೈಭವೀಕರಿಸಿ, ಎಲ್ಲರಿಗೂ ಉಣ ಬ­ಡಿ­ಸುವ ಟಿ.ವಿ, ಪತ್ರಿಕಾ ಮಾಧ್ಯಮಗಳು ಎಲ್ಲರೂ ಇದಕ್ಕೆ ಕಾರಣ.

ಮಕ್ಕಳಲ್ಲಿ ಭಾವನಾತ್ಮಕ ದೃಢತೆಯನ್ನು, ಜೀವನ ಪ್ರೀತಿಯನ್ನು, ಕಲಿಕೆ–ವಿದ್ಯಾಭ್ಯಾಸದ ಸವಾ­ಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯ­ವನ್ನು, ನಿರಾಶೆಯನ್ನು ಪರಿಣಾಮ­ಕಾರಿ­ಯಾಗಿ ಎದುರಿಸುವ ಮನೋಬಲವನ್ನು
ಪಾಲ­ಕರು, ಶಿಕ್ಷಕರು, ಮಾಧ್ಯಮದವರು ಹಾಗೂ ಸಮಾಜ ನೀಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.