ವೈ.ಗ. ಜಗದೀಶ್ ಅವರ ‘ಆಳ–ಅಗಲ’ (ಪ್ರ.ವಾ., ಸೆ. 23) ಓದಿ, ಬೀಭತ್ಸರಸದ ಆಳ, ಅಗಲದಲ್ಲಿ ಮುಳುಗಿ ತೇಲಿದಂತಾಯಿತು!
ಇಷ್ಟಕ್ಕೂ ಆ ಹೆಂಟೆ ಹೆಂಟೆ ಮಲ ಯಾರದು? ನಮ್ಮದೇ ಅಲ್ಲವೆ? ಆದ್ದರಿಂದ ಸ್ವ ಜುಗುಪ್ಸೆ ಮೇರೆವರಿಯಿತು!
ಆ ಅಸಹ್ಯ ಒಂದು ಕ್ಷಣ ವೈರಾಗ್ಯಕ್ಕೆ ಎಡೆಗೊಟ್ಟರೂ, ‘ಶ್ಮಶಾನ ವೈರಾಗ್ಯ’ದಂತೆ ‘ಶೌಚಾಲಯ ವೈರಾಗ್ಯ’, ಬಿಡಿ. (ಸುಧಾರಿಸಲಿ, ಪಾಪ, ಆ ‘ಜಾಡಮಾಲಿ’ಗಳ ಬದುಕಿನ ಜಾಡು).
–ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.