ADVERTISEMENT

ಸಂಚಾರ ದಟ್ಟಣೆ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2016, 19:30 IST
Last Updated 11 ಜುಲೈ 2016, 19:30 IST
ಸಂಚಾರ ದಟ್ಟಣೆ ತಪ್ಪಿಸಿ
ಸಂಚಾರ ದಟ್ಟಣೆ ತಪ್ಪಿಸಿ   

ನಗರದ ಕ್ವೀನ್ಸ್ ರಸ್ತೆಯ ಹಾ.ಮಾ. ನಾಯಕ್ ವೃತ್ತದ ಬಳಿ ಇರುವ ಸರ್ಕಾರಿ ಪಶು ಆಸ್ಪತ್ರೆಯ ದನಕರುಗಳು ಆಸ್ಪತ್ರೆಯ ಆವರಣದಿಂದ ಹೊರಬಂದು ರಸ್ತೆಗಳ ಮೇಲೆ ತಿರುಗಾಡುತ್ತಿವೆ.

ಇದರಿಂದಾಗಿ ಬೆಂಗಳೂರು ದಂಡು ಪ್ರದೇಶದಿಂದ ಶಿವಾಜಿನಗರದ ಕಡೆ ಬರುವ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆಯ ನಡುವೆ ನಿಲ್ಲುವ  ದನಗಳಿಗೆ ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದು ಅಫಘಾತಗಳು ಆದ ಉದಾಹರಣೆಗಳೂ ಇವೆ. ಈ ಕುರಿತು ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ.

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪಶುಗಳ ಹಾಗೂ ವಾಹನ ಸವಾರರ ಜೀವ ಉಳಿಸಲು ಸಂಬಂಧಪಟ್ಟವರು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.