ನಮ್ಮಲ್ಲಿ ‘ಸಂದಿಯಲ್ಲಿ ಸಮಾರಾಧನೆ’ ಎಂಬ ವ್ಯಂಗ್ಯ ನುಡಿಗಟ್ಟೊಂದು ಉಂಟು. ದೇಶದ ಸುತ್ತಮುತ್ತ, ಒಳಗೆ ಕೂಡ ಶತ್ರುಗಳ, ಭಯೋತ್ಪಾದಕರ ಹಾವಳಿ, ಲೆಕ್ಕವಿಲ್ಲದಷ್ಟು ಸಮಸ್ಯೆಗಳು, ಸಾಲದ್ದಕ್ಕೆ ‘ನಕ್ಷತ್ರಿಕ’ರ – ನಕ್ಸಲರ ಕಾಟ ಬೇರೆ!
(ಅವರಲ್ಲಿ ಮಹಿಳೆಯರೂ ಉಂಟು) ಇದನ್ನು ‘ಸಂದಿಯಲ್ಲಿ ಸಮಾರಾಧನೆ’ ಎನ್ನಬಹುದು: ರಕ್ತ ಸಮಾರಾಧನೆ!
ಯಾವ ಪುರುಷಾರ್ಥ, ಸ್ತ್ರೀsರ್ಥಗಳಿಗಾಗಿ ನಕ್ಸಲೀಯರ ಈ ಹಿಂಸಾಚಾರ? (ಕೇವಲ ಪ್ರಚಾರಕ್ಕಾಗಿಯೇನು?) ಅರ್ಥವಾಗದು. ಒಟ್ಟಿನಲ್ಲಿ ರಾಷ್ಟ್ರದ ದುರದೃಷ್ಟ!
– ಸಿ.ಪಿ.ಕೆ. ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.