ADVERTISEMENT

ಸಿಗ್ನಲ್ ಅವಧಿ ಹೆಚ್ಚಿಸಿ...

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಕಾವೇರಿ ಜಂಕ್ಷನ್ ಕಡೆಯಿಂದ ಮಲ್ಲೇಶ್ವರದ ಕಡೆಗೆ ಹೋಗುವ ಸದಾಶಿವನಗರ ಬಾಷ್ಯಂ ವೃತ್ತದ ಬಳಿ ಸಿಗ್ನಲ್ ಅವಧಿ ಕೇವಲ 27 ನಿಮಿಷಗಳದ್ದಾಗಿದೆ. ಇದರಿಂದ ವಾಹನ ಚಾಲಕರಿಗೆ ತುಂಬಾ ತೊಂದರೆ ಆಗುತ್ತಿದೆ.

ಕೆಂಪು ಸಿಗ್ನಲ್ ಬಿದ್ದರೂ ಉಳಿದ ಕಡೆಯಿಂದ ಬರುವ ವಾಹನಗಳು 5-10 ಸೆಕೆಂಡ್ ಹೆಚ್ಚಿಗೆ ಓಡಾಡುವ ಕಾರಣ, ಕಾವೇರಿ ಜಂಕ್ಷನ್ ಕಡೆಯಿಂದ ಮಲ್ಲೇಶ್ವರದತ್ತ ಹೋಗುವವರಿಗೆ ಕೇವಲ 10-15 ಸೆಕೆಂಡ್ ಉಳಿಯುತ್ತದೆ. ಒಂದೆರಡು ವಾಹನ ದಾಟುವ ಒಳಗೇ ಕೆಂಪು ಸಿಗ್ನಲ್ ಬಿದ್ದು ಬಿಡುತ್ತದೆ. ಪುನಃ ಹಸಿರು ಸಿಗ್ನಲ್ ಬರಲು ಮೂರು ನಿಮಿಷ ಕಾಯಬೇಕು.
ವಾಹನಗಳ ದಟ್ಟಣೆ ಹೆಚ್ಚಿರುವ `ಪೀಕ್ ಅವರ್~ನಲ್ಲಿ ಕೂಡ ಇದೇ ರೀತಿ ಆಗುವುದಿಂದ ತೊಂದರೆ ಆಗುತ್ತಿದೆ. ದಯವಿಟ್ಟು ಸಿಗ್ನಲ್ ಅವಧಿ ಹೆಚ್ಚು ಮಾಡಬೇಕಾಗಿ ವಿನಂತಿ
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.