ADVERTISEMENT

ಸಿಡಿಲ ಸಾವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬರದ ಬೇಗೆಯಲ್ಲಿ ಬೆಂಕಿಯಂಥ ಮಳೆ
ಬೆಂದ ಜೀವಕ್ಕೆ ಮಿಂಚು ಸಿಡಿಲಿನಾ ಕಳೆ!
ತಣ್ಣಗಾಗಲಿಲ್ಲ ಇಳೆ, ಬೆಳಗಲಿಲ್ಲ ಬೆಳೆ
ಬಳಲಿದಾ ಜೀವಗಳಿಗೆ
ಬಿಸಿಲ ಬಾಣಲೆಯಲ್ಲಿ
ನೀರ ಮಾಯಾಂಗನೆಯ ಆಟ;
ಕುದಿವ ಪ್ರಕೃತಿಯಲ್ಲಿ ಕೇಕೆ ಹಾಕುತ್ತಿದೆ
ಸಾವಿನ ಓಟ
ಭೂರಮೆಯ ಬಗೆದ ಬಲ್ಲಿದರೆಲ್ಲಾ
ತಂಪಿನರಮನೆಯಲ್ಲಿ,
ತುತ್ತು ಅನ್ನಕ್ಕೆ ಕೈ ಹೊತ್ತವರು
ಆಪು, ಹೆಂಚಿನ, ತಡಿಕೆಯಲ್ಲಿ;
ಪಡೆದು ಧನ್ಯರಾಗಿದ್ದಾರೆ
ಪುಣ್ಯದಾ ಸಾವು
ಬದುಕಿರುವ ಪಾಪಿಗಳಿಗೆ
ಬಿಡುವುದಿಲ್ಲ ಇವರ ಶಾಪದಾ ಕಾವು!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.