ADVERTISEMENT

ಸ್ವಲ್ಪ `ಅಡ್ಜೆಸ್ಟ್' ಮಾಡ್ಕೊಳ್ಳಿ!

ಪ್ರೊ ಆರ್‌ ವಿ ಹೊರಡಿ ಧಾರವಾಡ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

`ಮರಳು ಸಾಗಣೆ ಲಾರಿ ಮಾಲೀಕರ ಸಮಸ್ಯೆ ಬಗೆಹರಿಸಿ' ಎಂದು ಲೋಕೋಪಯೋಗಿ ಸಚಿವರನ್ನು ಕೇಳಿದರೆ `ಸಮಸ್ಯೆ ಬಗೆಹರಿಸಲು ಎರಡು ತಿಂಗಳ ಕಾಲಾವಕಾಶ ಕೊಡಿ' ಎಂದು ಕೇಳಿದ ಮಂತ್ರಿ ಮಹಾಶಯರು, “ಅಲ್ಲಿಯವರೆಗೆ ಅಧಿಕಾರಿಗಳೊಂದಿಗೆ, ಪೊಲೀಸರೊಂದಿಗೆ `ಅಡ್ಜೆಸ್ಟ್' ಮಾಡಿ ಕೊಂಡು ಸಾಗಣೆ ಮಾಡಿ” ಎಂದು, ಖುಲ್ಲಂಖುಲ್ಲಾ, ರಾಜಾರೋಷವಾಗಿ ಲಂಚಗುಳಿತನ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವುದು, `ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ'.

ಲೋಕೋಪಯೋಗಿ ಮಂತ್ರಿ ಲೋಕೋಪಕಾರ ಮಾಡುವ ಸಲುವಾಗಿ ಮರಳು ಸಾಗಣೆ ಸಮಸ್ಯೆಗೆ `ಸರಳ ಉಪಾಯ ಸೂಚಿಸಿ' ಸನ್ಮಾರ್ಗ ದರ್ಶನ ಮಾಡಿದ್ದಾರೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.