ADVERTISEMENT

ಹಳ್ಳಿಗಳ್ಲ್ಲಲೂ ತಪಾಸಣೆ ಮಾಡಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಔಷಧಿ ನಿಯಂತ್ರಣ ಕಾಯಿದೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ಕೆಲವೊಂದು ಅಂಗಡಿಗಳನ್ನು ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದ ಅಂಗಡಿಗಳ ಪರವಾನಗಿಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ವೃತ್ತ ಸಹಾಯಕ ಔಷಧಿ ನಿಯಂತ್ರಕರು (ಪ್ರಜಾವಾಣಿ, ಹುಬ್ಬಳ್ಳಿ ಆವೃತ್ತಿ ಜ. 19) ತಿಳಿಸಿದ್ದಾರೆ.
 
ಅವರಿಗೆ ನಮ್ಮ ಅಭಿನಂದನೆಗಳು. ಆದರೆ ಕಾಯಿದೆ ಉಲ್ಲಂಘನೆ ಹಳ್ಳಿಗಳ್ಲ್ಲಲೂ ನಡೆಯುತ್ತಿದೆ. ಗಿಣಿಗೇರಾ, ಭಾಗ್ಯನಗರ ಮತ್ತಿತರ ಹಲವು  ಹಳ್ಳಿಗಳಲ್ಲಿ ಅನಧಿಕೃತವಾಗಿ ಔಷಧ ವ್ಯಾಪಾರ ನಡೆಯುತ್ತಿದೆ. ಅಮಾಯಕರ ಜೀವಗಳ ಜೊತೆ ಆಟವಾಡುವ ಇಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.