ಕಂಡದ್ದು ಬಿಡದು ಹಾಳು ದೆವ್ವ
ಎಂಬ ಗಾದೆಯಂತೆ
ಕೊಡೆವೆಂಬ ರೈತರ ಹಟ
ಬಿಡೆವೆಂಬ ಸರ್ಕಾರದ ಹೂಟ
ಇದಕ್ಕೆಂದೇ `ಸ್ವಯಂ
ಪ್ರೇರಿತ ಭೂ ಬ್ಯಾಂಕು~
ಎಂಬ ತಂತ್ರ.
ಸ್ವಯಂ ಪ್ರೇರಿತವೋ
ಬಲವಂತವೋ
ರೈತರ ಸಮಾಧಿಗಳ ಮೇಲೆ
ಯಂತ್ರಗಳ ಅಟ್ಟಹಾಸ
ಕಂಡದ್ದು ಬಿಡದು ಹಾಳು ದೆವ್ವ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.