ADVERTISEMENT

‘ಅನಂತ’ ನಮನಗಳು

ಚಂದ್ರಶೇಖರ್ ಎನ್, ಗೌರಿ, ಸಿರಿವಂತೆ
Published 24 ಆಗಸ್ಟ್ 2014, 19:30 IST
Last Updated 24 ಆಗಸ್ಟ್ 2014, 19:30 IST

ಅನಂತಮೂರ್ತಿಯವರ ಸಾವಿನಿಂದ ಲಕ್ಷಾಂತರ ಅಭಿಮಾನಿಗಳಲ್ಲಿ ಅನಾಥ ಭಾವವೊಂದನ್ನು ಹುಟ್ಟು­ಹಾಕಿದೆ.  ಆದರೆ ಅವರ ಸಾವನ್ನೂ ಕೂಡ ಸಂಭ್ರಮಿಸಿದ ಮನಸುಗಳದ್ದು ಅದೆಂಥಾ -ವಿಕೃತ ಮನ­­ಸ್ಥಿತಿ! ಇಂಥವರನ್ನು ಸೃಷ್ಟಿಸಿದ ಆ ಧರ್ಮದ ವಕ್ತಾರರೆಂಬಂತೆ ವರ್ತಿಸುವ ಹಿರಿಯರು ಈ ಬಗ್ಗೆ ಗಾಢವಾಗಿ ಯೋಚಿಸಬೇಕು.

ಏಕೆಂದರೆ ಹಿಂದೂ ಮತ ಅತ್ಯಂತ ವಿಶಾಲ ಮನೋಧರ್ಮದ ಮತ. ಇಲ್ಲಿ ಆಸ್ತಿಕತೆಯೂ ಇದೆ. ನಾಸ್ತಿಕತೆಯೂ ಇದೆ. ಗೊಡ್ಡು ಆಚರಣೆಗಳೂ ಇವೆ. ವೈಜ್ಞಾನಿಕ ದೃಷ್ಟಿ­ಕೋನ­­­ಗಳೂ ಇವೆ. ವೈಜ್ಞಾನಿಕವಾದ ನೂರಾರು ಆಚರಣೆಗಳು ಬರುಬರುತ್ತಾ ಗೊಡ್ಡಾಗಿ ಮಾರ್ಪಟ್ಟವೂ ಇವೆ. ವಿವೇಚಿಸುವ, ವಿಷಯದಾಳಕ್ಕಿಳಿವ, ಆಚರಣೆಗಳ ಹಿಂದಿನ ಉದ್ದೇಶವನ್ನು ಅರಿ­ಯುವ ಮನಸ್ಥಿತಿಗಳು ಕುರುಡಾಗುತ್ತಾ, ಬರಿದೇ ಶಾಸ್ತ್ರಕ್ಕಾಗಿ ಆಚರಿಸುವವರೆ ಒಂದು ಧರ್ಮದಲ್ಲಿ ತುಂಬುತ್ತಾ ಹೋದಂತೆ ಆಗುವ ಅಪಾಯಗಳಿಗೆ ಸಾಕ್ಷಿಯೇ ಈ ಕೊಳೆತ ಮನಸ್ಸುಗಳು ಹಾಗೂ ಅವು­ಗಳ ಸೃಷ್ಟಿಕರ್ತರು. ನಿಜವಾದ ಹಿಂದೂ ಮತಾನುಯಾಯಿ ಹೀಗೆಲ್ಲಾ ಮಾಡಲಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.