ADVERTISEMENT

ಬೇಕಿಲ್ಲ ಪ್ರತ್ಯೇಕ ಧರ್ಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

‘ಬ್ರಾಹ್ಮಣ ಧರ್ಮವಾಗಲಿ’ ಎಂಬ ಡಾ. ದೇವಿದಾಸ ಪ್ರಭು ಅವರ ಅಭಿಪ್ರಾಯಕ್ಕೆ (ವಾ.ವಾ., ಜ.3) ನನ್ನ ಸಹಮತವಿಲ್ಲ. ಏಕೆಂದರೆ, ಬ್ರಾಹ್ಮಣ ವರ್ಣದ ಕರ್ತವ್ಯಗಳ ಬಗೆಗೆ ಹೇಗೆ ವೇದಗಳಲ್ಲಿ ಹೇಳಲಾಗಿದೆಯೋ ಹಾಗೆಯೇ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳ ಕರ್ತವ್ಯಗಳ ಬಗೆಗೂ ಅದೇ ವೇದಗಳಲ್ಲಿ ಹೇಳಲಾಗಿದೆ. ಆದಕಾರಣ ಇತರ ಮೂರೂ ವರ್ಣಗಳ ಜನರೂ ವೈದಿಕ ಧರ್ಮಾನುಯಾಯಿಗಳೇ ಆಗಿರುತ್ತಾರೆ. ಪೌರೋಹಿತ್ಯ, ಪೂಜೆ ಇತ್ಯಾದಿಗಳನ್ನು ವೈದಿಕ ವೃತ್ತಿ ಅಂತ ಪರಿಗಣಿಸಿದರೂ ಉಳಿದ ಮೂರೂ ವರ್ಣಗಳು (ಆಯ್ಕೆಗಳು) ಸಹ ವೇದಗಳಲ್ಲಿ ಉಲ್ಲೇಖವಾಗಿರುವ ವೈದಿಕ ವೃತ್ತಿಗಳೇ ಆಗುತ್ತವೆ.

ಈ ಕಾರಣಗಳಿಂದ, ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರೂ ಕೈಹಾಕಬಾರದು ಎಂದು ಕೇಳಿಕೊಳ್ಳುತ್ತೇನೆ. ಸಾಧ್ಯವಾದರೆ ವೀರಶೈವ ಲಿಂಗಾಯತರನ್ನೋ, ಜೈನ, ಬೌದ್ಧರನ್ನೋ ಹಿಂದೂ ಧರ್ಮದೊಳಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡೋಣ. ಯಾವಾಗಲೂ ಒಡಕಿಗಿಂತ ಒಗ್ಗಟ್ಟಿನಲ್ಲಿ ಬಲ ಹೆಚ್ಚು. ಆದಕಾರಣ ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡುವ ಅಗತ್ಯವಿಲ್ಲ.

–ಜಿ.ವಿ. ಗಣೇಶಯ್ಯ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.