ADVERTISEMENT

ಭದ್ರತೆ ಒದಗಿಸಿ

ನಾಗರಾಜ್ ಮಾದೇಗೌಡ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ಬಾರ್‌ಗೆ ಬೆಂಕಿ ಹತ್ತಿಕೊಂಡು ಐವರು ಕೆಲಸಗಾರರು ಸಾವನ್ನಪ್ಪಿದ್ದು, ಸೋಮಸುಂದರ ಪಾಳ್ಯದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಎಸ್‌ಟಿಪಿ ಸ್ವಚ್ಛಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡದ್ದು, ರಾಜ ಕಾಲುವೆಯಲ್ಲಿ ಎರಡೂವರೆ ವರ್ಷದ ಮಗು ಬಿದ್ದು ಸತ್ತಿದ್ದು... ಇವು ಬೆಂಗಳೂರಿನಲ್ಲಿ ಈ ವಾರ ದಾಖಲಾದ ಕೆಲವು ದಾರುಣ ಸಾವಿನ ಪ್ರಕರಣಗಳು.

ದಯನೀಯ ಸಂಗತಿಯೆಂದರೆ ಈ ಎಲ್ಲಾ ಕುಟುಂಬಗಳು ಹೊಟ್ಟೆಪಾಡಿಗಾಗಿ ಹಳ್ಳಿಯನ್ನು ಬಿಟ್ಟು ಬಂದು ನಗರದಲ್ಲಿ ಬದುಕ ಕಟ್ಟಿಕೊಂಡಿದ್ದವರು. ಅವರಲ್ಲಿ ಕೆಲವರು ತಮ್ಮ ಸಂಸಾರದ ಆಧಾರ ಸ್ತಂಭವಾಗಿದ್ದವರು.

ಸತ್ತಾಗ ಹೋಗಿ, ಒಂದಿಷ್ಟು ಪರಿಹಾರವನ್ನು ಕೊಟ್ಟು ಕೈ ತೊಳೆದುಕೊಳ್ಳುವ ಬದಲು ನಮ್ಮ ಸರ್ಕಾರಗಳು ಇಂತಹ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಸುರಕ್ಷಾ ಕ್ರಮಗಳನ್ನು ತಪ್ಪದೆ ಪಾಲಿಸುವ ನಿಯಮ ಜಾರಿಗೊಳಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.