ಸರ್ಕಾರಿ ಪ್ರಾಯೋಜಿತ ಜಯಂತಿಗಳ ಒಟ್ಟು ಸಂಖ್ಯೆ 30ರ ಆಸುಪಾಸಿನಲ್ಲಿ ಇರುವುದನ್ನು ನೋಡಿದರೆ (ಪ್ರ.ವಾ., ಜ. 3), ನಮ್ಮ ಸರ್ಕಾರವು ಸಮಾಜವನ್ನು ಹೊಸ ಸ್ವರೂಪದ ಜಾತೀಯತೆಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿರುವಂತಿದೆ. ಇದು ಚರ್ಚಾರ್ಹ ಸಂಗತಿ.
ಮಹಾಪುರುಷರು ಎಂದು ಪರಿಗಣಿಸಿರುವುದು ಅವರು ಎಲ್ಲಾ ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ನಿಸ್ವಾರ್ಥದಿಂದ ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಸಮಾಜವನ್ನು ಮುನ್ನಡೆಸಿದರು ಎಂಬ ಕಾರಣಕ್ಕೆ. ಅಂತಹವರ ಬಗ್ಗೆ ನಾಡಿನ ಎಲ್ಲರಿಗೂ ಅಭಿಮಾನ ಇರುತ್ತದೆ. ಅವರ ಜಯಂತಿಯನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ ಆಚರಿಸಿದರೆ ಮಾತ್ರ ಆ ಸಾಧಕರಿಗೆ ಗೌರವ ಸಲ್ಲುತ್ತದೆ ಎಂಬ ಮನೋಭಾವ ಸರಿಯಲ್ಲ. ಬದಲಾಗಿ, ಅವರ ತತ್ವ- ಸಿದ್ಧಾಂತ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರ ಸ್ಮರಣೆಯ ಸಾರ್ಥಕ್ಯವನ್ನು ಕಾಣಬೇಕಾಗಿದೆ.
–ಡಿ.ಎಂ.ಬಸೆಟ್ಟೆಪ್ಪ,ಎಚ್.ವೀರಾಪುರ, ಕುರುಗೋಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.