ADVERTISEMENT

ವಿಷಗಾಳಿ ತಡೆದ ವೈಮಾನಿಕ ಪ್ರದರ್ಶನ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 19:30 IST
Last Updated 7 ಫೆಬ್ರುವರಿ 2021, 19:30 IST

ಬೆಂಗಳೂರು ವೇದಿಕೆಯಾಗಿದ್ದ ಅದ್ಭುತ ಹಾಗೂ ವೀರೋಚಿತವಾದ ಭಾರತೀಯ ವೈಮಾನಿಕ ಪ್ರದರ್ಶನವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡೆವು. ಗಗನದೆತ್ತರಕ್ಕೆ ನಮ್ಮ ಸಾಧನೆಗಳು ವಿಜೃಂಭಿಸಿದವು. ನಿತ್ಯ ನಾವು ಅನುಭವಿಸುವ ಮಾನವೀಯ ವಿಷಗಾಳಿಗಳಾದ ಪಕ್ಷ ಸಂಘರ್ಷ, ಜಾತಿ ಸಂಘರ್ಷ ಹಾಗೂ ದುಡ್ಡಿನ ಹಪಹಪಿಗಳಿಂದ ಕೆಲಕ್ಷಣವಾದರೂ ಬಿಡುಗಡೆ ಪಡೆದು, ಎತ್ತರೆತ್ತರಕ್ಕೆ ಏರಿ, ನಮ್ಮ ವಿಜ್ಞಾನಿಗಳ ಸಾಧನೆಗಳನ್ನು ಕಣ್ಣಾರೆ ಕಂಡು ಮೈಮರೆತೆವು. ಇಂಥ ವೀರೋಚಿತ ಸಾಧನೆಗಳಿಂದ ನಮ್ಮ ನಿತ್ಯ ಬದುಕಿನ ಜಡತ್ವವನ್ನು, ದ್ವಂದ್ವಗಳನ್ನು ಕಳೆದ ಆ ವೈಮಾನಿಕ ಸಾಹಸಿಗಳಿಗೆ, ವಿಜ್ಞಾನಿಗಳಿಗೆ ನಮ್ಮೆಲ್ಲರ ಹೃದಯತುಂಬಿದ ಅಭಿನಂದನೆ.

-ಪ್ರೊ. ಜಿ.ಎಚ್.ಹನ್ನೆರಡುಮಠ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT