‘ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಲಿಲ್ಲ’ ಎಂದು ಹೇಳಿದ ಸಂಸದ ಅನಂತಕುಮಾರ ಹೆಗಡೆ (ಪ್ರ.ವಾ., ಫೆ. 2) ಮಾರ್ಮಿಕವಾಗಿ ಗಾಂಧೀಜಿಯತ್ತ ಕೈ ತೋರಿಸಿದ್ದಾರೆ. ಉತ್ತಮ ವಾಗ್ಮಿಯಾದ ಹೆಗಡೆ, ಭಾರತಕ್ಕೆ ಸ್ವಾತಂತ್ರ್ಯ ಹೇಗೆ ಲಭಿಸಿತು ಎಂಬುದನ್ನು ವಸ್ತುನಿಷ್ಠವಾಗಿ ಇಂದಿನ ಪೀಳಿಗೆಗೆ ವಿವರಿಸಬೇಕಿತ್ತು. ಅವರ ಗುರಿ ಕಾಂಗ್ರೆಸ್ ಮತ್ತು ಗಾಂಧಿ ಆಗಿದ್ದರಿಂದ, ಇವರನ್ನು ಕುಟುಕುವುದರಲ್ಲೇ ಅವರು ಸಂತೋಷಪಟ್ಟಂತಿದೆ. ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಲಿಲ್ಲ ಎನ್ನುವುದು ಕುಚೋದ್ಯದ ಮಾತು.
ಕೆ.ಎನ್.ಭಗವಾನ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.