ADVERTISEMENT

ರೈತರಿಗೆ ನೆರವಾಗಲು ಅಮಿತಾಭ್‌ ಬಚ್ಚನ್ ನಿರ್ಧಾರ: ವಿಶ್ವಾಸ ತುಂಬುವ ನಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 20:00 IST
Last Updated 21 ಅಕ್ಟೋಬರ್ 2018, 20:00 IST
   

ನಟ ಅಮಿತಾಭ್‌ ಬಚ್ಚನ್ ಅವರು ಉತ್ತರಪ್ರದೇಶದ ಕೆಲವು ರೈತರನ್ನು ಸಾಲಬಾಧೆಯಿಂದ ಮುಕ್ತರಾಗಿಸಲು ನಿರ್ಧರಿಸಿರುವುದು ಪ್ರಶಂಸನೀಯ. ಸಣ್ಣ ರೈತರಿಗೆ ಬೇಸಾಯ ಎಂಬುದು ಹೊರೆಯಾಗಿ ಪರಿಣಮಿಸಿದೆ. ಮಳೆ, ಅದನ್ನು ಆಧರಿಸಿದ ಬೆಳೆ ಮತ್ತು ಕೃಷಿ ಉತ್ಪನ್ನಗಳಿಗೆ ಸಿಗುವ ಬೆಲೆ ಎಲ್ಲವೂ ಅನಿಶ್ಚಯ. ಇದರ ಪರಿಣಾಮವೇ ಹತಾಶೆ ಮತ್ತು ಅತಿರೇಕದ ನಿರ್ಧಾರಗಳು.

ಸಾಲದ ಸುಳಿಗೆ ಸಿಲುಕಿದ ಅಂತಹ ಕೆಲವು ಕೃಷಿಕರಿಗೆ ಅಮಿತಾಭ್‌ ಸಹಾಯಹಸ್ತ ಚಾಚಲು ನಿರ್ಧರಿಸಿರುವುದು ಭರವಸೆಯ ಆಶಾಕಿರಣ. ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ವಿಶ್ವಾಸ ತುಂಬುವ ಕೆಲಸ.

–ಪೂರ್ಣಿಮಾ ಮೂರ್ತಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.