ADVERTISEMENT

ವಾಚಕರ ವಾಣಿ: ತಳಮಳ ಹುಟ್ಟಿಸಿದ ಬರಹ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಜೂನ್ 2021, 19:45 IST
Last Updated 21 ಜೂನ್ 2021, 19:45 IST

ವನ್ಯಜೀವಿ ಛಾಯಾಗ್ರಹಣದ ನೈತಿಕ ಪ್ರಶ್ನೆ ಕುರಿತ ಅಖಿಲೇಶ್ ಚಿಪ್ಪಳಿ ಅವರ ವಿಶ್ಲೇಷಣಾ ಲೇಖನವು (ಪ್ರ.ವಾ., ಜೂನ್‌ 21) ಮನಸ್ಸನ್ನು ಕದಡಿತು. ಯಾವ ವಿಡಿಯೊಗಳನ್ನು ನೋಡಿ ಮೆಚ್ಚಿ ತಲೆದೂಗುತ್ತೇವೋ ಅವುಗಳ ಹಿಂದೆ ಸರಿಪಡಿಸಲಾಗದ ತಪ್ಪುಗಳು ಘಟಿಸಿಹೋಗಿರುತ್ತವೆಯಲ್ಲಾ ಎಂದರಿತು ಬೇಸರವಾಯಿತು. ನಾವು ಪರಿಸರದ ವಿಚಾರವಾಗಿ ಮತ್ತಷ್ಟು ಸೂಕ್ಷ್ಮ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕೆಂಬ ಎಚ್ಚರವನ್ನು ಈ ಲೇಖನ ನೀಡಿತು.

-ವಸುಂಧರಾ ಕದಲೂರು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.