ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಗರದೊಳಗೆ ಲಕ್ಷಾಂತರ ಸಸಿಗಳು ಸಾಯುತ್ತಿರುವ ವಿಚಾರ ನಿಜಕ್ಕೂ ಕಳವಳಕಾರಿ. ಸಸಿ ನೆಡಲು ಕೋಟ್ಯಂತರ ರೂಪಾಯಿ ಖರ್ಚು ಆಗುತ್ತಿದೆ. ಆದರೆ ಸಸಿಗಳು ಉಳಿಯುತ್ತಿಲ್ಲ ಎಂಬುದು ಪರಿಸರ
ಪ್ರೇಮಿಗಳು ಚಿಂತಿಸಬೇಕಾದ ಸಂಗತಿ.
ಬೆಂಗಳೂರಿನ ಕೆಲವು ಸರ್ಕಾರೇತರ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿವೆ. ಮಾತ್ರವಲ್ಲದೆ ಸಸಿ ಸಂರಕ್ಷಕರನ್ನು ನೇಮಿಸಿ ಗಿಡಗಳ ಆರೈಕೆ ಮಾಡುತ್ತಿವೆ. ನಗರದಲ್ಲಿರುವ ಎಲ್ಲ ಸಂಘ ಸಂಸ್ಥೆಗಳು, ನಿಸರ್ಗ ಪ್ರೇಮಿಗಳು ಇದೇ ರೀತಿಯ ಬದ್ಧತೆಯಿಂದ ಕಾರ್ಯಪ್ರವೃತ್ತರಾದರೆ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾದೀತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.