ADVERTISEMENT

ವಾಚಕರ ವಾಣಿ: ರಥದಲ್ಲಿ ಸಂವಿಧಾನಶಿಲ್ಪಿ ಹೆಮ್ಮೆಯ ಸಂಗತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:30 IST
Last Updated 11 ನವೆಂಬರ್ 2022, 19:30 IST

ವಿಜಯನಗರ ಜಿಲ್ಲೆ ಹರಪನಹಳ್ಳಿಯ ವೀರಭದ್ರೇಶ್ವರ ದೇವಸ್ಥಾನ ಸಮಿತಿಯು ಈಚೆಗೆ ನೂತನವಾಗಿ ನಿರ್ಮಿಸಿ ರುವ ರಥದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವಾರು ದಾರ್ಶನಿಕರ ಭಾವಚಿತ್ರಗಳನ್ನು ಅಳವಡಿಸಿರುವ ವರದಿ (ಪ್ರ.ವಾ., ನ. 8) ಓದಿ ಹೆಮ್ಮೆ ಎನಿಸಿತು.

ಅಂಬೇಡ್ಕರ್ ಅವರು ರೂಪಿಸಿರುವ ನಮ್ಮ ದೇಶದ ಸಂವಿಧಾನವು ವಿಶ್ವಕ್ಕೇ ಆದರ್ಶವಾಗಿದೆ. ಸಂವಿಧಾನದ ನಿರ್ಮಾಣಕ್ಕಾಗಿ ಅಂಬೇಡ್ಕರ್ ಅವರು ಪಟ್ಟ ಪರಿಶ್ರಮ ದೊಡ್ಡದು. ಅಂಥ ಮಹನೀಯರ ಭಾವಚಿತ್ರವನ್ನು ರಥದಲ್ಲಿ ಅಳವಡಿಸುವ ಮೂಲಕ ದೇವಸ್ಥಾನ ಸಮಿತಿಯು ಸಂವಿಧಾನದ ಮೌಲ್ಯಗಳನ್ನು ಸಾರುತ್ತಿರುವುದು ಶ್ಲಾಘನೀಯ ಕಾರ್ಯ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.