ನಿದ್ದೆಗೆಟ್ಟು ರಾತ್ರಿ ಎಲ್ಲಾ ಎದ್ದು ಕುಂತಿದ್ನೋ ಯಪ್ಪಾ...
ನಿದ್ದೆ ಬರಲಾರ್ದಂಗೆ ಮಾಡಿಬಿಟ್ಟಿಯಲ್ಲೋ ಮಾರಾಯ
ನಾವು ಅಂತಾದ ಏನ್ ತಪ್ಪು ಮಾಡಿವೋ ಮಾಮ
ನಮ್ಮ ಅವ್ವನ್ನ ತವರಮನಿಗಿ ಕಳಿಸಿಲ್ಲ ಅಂತ
ಸಿಟ್ಟಾಗಿಯೇನೋ
ನಾವ್ ಕಳಿಸಿದ ಗಾಡಿ ಯಾಕ ತಡಿದಿಯೋ
ಈ ಕೋಪತಾಪ ಎಲ್ಲಾ ಬಿಟ್ಟಬಿಡು ಚಂದಮಾಮ
ನಾವ್ ಮತ್ತ ಗಾಡಿ ಕಳಸ್ತೀವಿ ಮಾರಾಯ
ನಿನಗ ಏನಾರ ಬೇಕಿತ್ತು ಅಂದ್ರ ಈಗ ಲಿಸ್ಟ್ ಮಾಡಿ
ಆರ್ಬಿಟರ್ ಕೂಡ ಸಂದೇಶ ಕಳಿಸಿಬಿಡಪ
ಹಣ ಬೇಕಿತ್ತು ಅಂದ್ರ ಸ್ವಿಸ್ ಬ್ಯಾಂಕಿಂದ ತಗದ್ಕೊಡ್ತೀವಿ
ಗಾಡಿ ಮಾತ್ರ ತಡಿಬ್ಯಾಡೋ...
-ಸದಾಶಿವ ಎಂ.,ಎಚ್.ಸಿದ್ಧಾಪೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.