ADVERTISEMENT

ವಾಚಕರ ವಾಣಿ: ಅಭಿಯಾನ ಆರೋಗ್ಯಸ್ನೇಹಿ ಆಗಿರಲಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 19:30 IST
Last Updated 13 ನವೆಂಬರ್ 2020, 19:30 IST

ಇಂದಿನಿಂದ ಜನವರಿ 24ರವರೆಗೆ ‘ಮಕ್ಕಳಸ್ನೇಹಿ’ ಗ್ರಾಮ ಪಂಚಾಯಿತಿ ಅಭಿಯಾನ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಮಕ್ಕಳಿಗೆ ಕಲಿಯುವ ಒತ್ತಾಸೆ ಮೂಡಿದಾಗ ಅವರು ಸುಲಭವಾಗಿ ಕಲಿಯಬಲ್ಲರು. ಅಂತಹ ವಾತಾವರಣವನ್ನು ಮಗುವಿಗೆ ಒದಗಿಸುವುದು ಅಭಿಯಾನದ ಉದ್ದೇಶ. ಕೊರೊನಾ ಪರಿಸ್ಥಿತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಮಕ್ಕಳು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು, ಸುರಕ್ಷತೆಯ ನಿಯಮಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ.

–ಶಿವಕುಮಾರ ಎಸ್., ಊರುಕೆರೆ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT