ADVERTISEMENT

ಸಂಪುಟ ಸರ್ಕಸ್!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಸೆಪ್ಟೆಂಬರ್ 2020, 20:30 IST
Last Updated 30 ಸೆಪ್ಟೆಂಬರ್ 2020, 20:30 IST

‘ಸರ್ಕಸ್ ಮಾಡಿ ರಾಜ್ಯ ಸರ್ಕಾರವನ್ನು ನಡೆಸುತ್ತಿದ್ದೇವೆ. ಬೇರೆ ಪಕ್ಷಗಳಿಂದ ಬಂದವರು, ಬಿಜೆಪಿಯೊಳಗಿನ ಹಿರಿಯರು ಸೇರಿದಂತೆ ಸಚಿವ ಸ್ಥಾನದ ಹಲವು ಆಕಾಂಕ್ಷಿಗಳಿದ್ದಾರೆ’ ಎಂದಿದ್ದಾರೆ ಸಚಿವ ಜಗದೀಶ ಶೆಟ್ಟರ್ (ಪ್ರ.ವಾ., ಸೆ. 30).

ಸರಿಯಾಗೇ ಹೇಳಿದ್ದಾರೆ! ಸರ್ಕಸ್‌ನ ‘ತಾಲೀಮಿನಲ್ಲಿ’ ಹಲ ಕಲಾವಿದರಿದ್ದು, ಅವರು ಸರ್ಕಾರ, ಪಕ್ಷ, ಕರ್ನಾಟಕದ ಜನರಿಗೆ ತಮ್ಮ ಬಗೆಬಗೆಯ ‘ಪ್ರದರ್ಶನ’ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಸರ್ಕಸ್ ಕಂಪನಿಗಳು ನೇಪಥ್ಯಕ್ಕೆ ಸರಿದಿರುವ ಈ ಹೊತ್ತಿನಲ್ಲಿ, ಜನರಿಗೆ ಇಂತಹ ಸರ್ಕಸ್ಸೇ ಪುಕ್ಕಟೆಯಾಗಿ ಮನರಂಜನೆ ನೀಡುವುದು!

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.