ADVERTISEMENT

ಆಗಲೇ ಅಗತ್ಯವಿತ್ತೆ ಶುದ್ಧೀಕರಣ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 18:11 IST
Last Updated 2 ಅಕ್ಟೋಬರ್ 2022, 18:11 IST
   

ಐವತ್ತು ವರ್ಷಗಳ ಹಿಂದೆಯೇ ಕಾಂಗ್ರೆಸ್ ಮಲಿನಗೊಂಡಿತ್ತೇ? ‘ಪ್ರಜಾವಾಣಿ’ಯ ‘50 ವರ್ಷಗಳ ಹಿಂದೆ’ ಅಂಕಣ (ಅ.1) ಗಮನಿಸಿದಾಗ ಈ ಮಾತು ನಿಜ ಅನಿಸುತ್ತದೆ. ಅಂದು ಕೆಂಗಲ್‌ ಹನುಮಂತಯ್ಯ ಅವರು ಕಾಂಗ್ರೆಸ್ ಶುದ್ಧೀಕರಣಕ್ಕೆಂದು ಮೂರು ವಾರಗಳ ಕಾಲ ಅಜ್ಞಾತವಾಸದಲ್ಲಿದ್ದು ಧ್ಯಾನಕ್ಕೆ ಕುಳಿತುಕೊಂಡ ವಿಚಾರ ಪ್ರಸ್ತುತದಲ್ಲಿ ಸಮಯೋಚಿತ. ರಾಹುಲ್ ಗಾಂಧಿ ಅವರ ‘ಭಾರತ್‌ ಜೋಡೊ’ ಯಾತ್ರೆಯನ್ನು ಕೂಡ ಕಾಂಗ್ರೆಸ್ ಶುದ್ಧೀಕರಣದ ಮತ್ತೊಂದು ಮಜಲು ಎಂದು ಭಾವಿಸಬಹುದು. ಆ ಪಕ್ಷ ಪರಿಶುದ್ಧಗೊಂಡು ಪುನಃ ಅಧಿಕಾರ ವಹಿಸಿಕೊಳ್ಳುವುದೇ? ಕಾಯ್ದು ನೋಡಬೇಕಿದೆ.

–ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT