ಪಟ್ಟಣ ಸಹಕಾರ ಬ್ಯಾಂಕ್ಗಳು ಮತ್ತು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ವಹಿವಾಟು ನಡೆಸುವ ಸಹಕಾರ ಬ್ಯಾಂಕ್ಗಳ ಸಂಪೂರ್ಣ ಮೇಲುಸ್ತುವಾರಿಯನ್ನು ಆರ್ಬಿಐ ಸುಪರ್ದಿಗೆ ಒಳಪಡಿಸುವ ನಿರ್ಣಯ ಸ್ವಾಗತಾರ್ಹ. ಸ್ವೇಚ್ಛಾಚಾರದ ಆಡಳಿತದ ಮೇಲೆ ನಿರ್ಬಂಧ ಹೇರಲು ಈ ಕ್ರಮ ನೆರವಾಗುತ್ತದೆ. ಇದರಿಂದ ಠೇವಣಿದಾರರ ಹಿತರಕ್ಷಣೆ ಸಾಧ್ಯವಾಗುತ್ತದೆ.
ಸ್ವಜನಪಕ್ಷಪಾತ ಮತ್ತು ರಾಜಕೀಯ ಹಸ್ತಕ್ಷೇಪದಿಂದ ಸಹಕಾರ ಬ್ಯಾಂಕ್ಗಳಲ್ಲಿ ಅವ್ಯವಹಾರಗಳು ಹೆಚ್ಚುತ್ತಿವೆ. ಕೆಲವು ಕುಟುಂಬಗಳು ಸಹಕಾರ ಬ್ಯಾಂಕ್ಗಳನ್ನು ತಮ್ಮ ಪೂರ್ವಜರ ಆಸ್ತಿ ಎಂಬಂತೆ ಬಳಸಿಕೊಳ್ಳುತ್ತಿವೆ. ಇಂತಹ ಸರ್ವಾಧಿಕಾರ ಧೋರಣೆಗೆ ಈ ಉಪಕ್ರಮಗಳಿಂದ ಕಡಿವಾಣ ಬೀಳುವುದೇ?
-ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.