‘ಕೊನೆ ನಮಸ್ಕಾರ, ಇರಲಿ ಸಂಸ್ಕಾರ’ ಎಂಬ ವಿಶೇಷ ವರದಿ (ಪ್ರ.ವಾ., ಜುಲೈ 19) ಅತ್ಯಂತ ಸಾಂದಭಿ೯ಕವಾಗಿದೆ. ಕೋವಿಡ್ ರೋಗಿಗಳು ಮೃತಪಟ್ಟಾಗ, ಸೋಂಕು ತಮಗೂ ಹರುಡುತ್ತದೆ ಎಂಬ ಭೀತಿಯಿಂದ ಮೃತರ ಕುಟುಂಬಸ್ಥರು, ಬಂಧು-ಬಳಗದವರು ಅಂತ್ಯಕ್ರಿಯೆಯಿಂದ ದೂರ ಸರಿದು ಅನಾಥಶವಗಳನ್ನಾಗಿ ಮಾಡುತ್ತಿದ್ದಾರೆ. ಮಾನವೀಯ ಮೌಲ್ಯ, ಆಚಾರ-ವಿಚಾರ, ಸಂಪ್ರದಾಯ ಎಲ್ಲವೂ ದೂರವಾಗುತ್ತಿರುವುದು ನಿಜಕ್ಕೂ ಅಮಾನವೀಯ.
ಇಂತಹ ಸಂದರ್ಭದಲ್ಲಿ, ಕೋವಿಡ್ ರೋಗಿಗಳ ಮರಣಾನಂತರ ವೈರಾಣು ಹರಡದು ಎಂಬುದನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟ, ಅವರ ಅಂತ್ಯಕ್ರಿಯೆಗೆ ಯಾವುದೇ ರೀತಿ ಅಡ್ಡಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ವೈದ್ಯರಿಗೆ ಧನ್ಯವಾದಗಳು.
- ಎ.ಜಿ.ಸುರೇಂದ್ರಬಾಬು,ಹೊಳಲ್ಕೆರೆ, ಚಿತ್ರದುಗ೯
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.