ADVERTISEMENT

ವಾಚಕರ ವಾಣಿ: ಮರೆಯದಿರಿ ನಿಯಮ ಪಾಲನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST

ಜನ ನಿಯಮ ಪಾಲಿಸದಿದ್ದರೆ ಮತ್ತೆ ಲಾಕ್‌ಡೌನ್ ಮಾಡುವುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ. ಹೌದು, ಚಿತ್ರಮಂದಿರಕ್ಕೆ ಹೌಸ್‌ಫುಲ್ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ ನಿಯಮ ಪಾಲಿಸುವ ಜವಾಬ್ದಾರಿ ಪ್ರೇಕ್ಷಕರದು. ಬಸ್ಸುಗಳಿಗೆ ಯಾವುದೇ ನಿರ್ಬಂಧವಿಲ್ಲ, ಎಚ್ಚರಿಕೆ ತೆಗೆದುಕೊಳ್ಳಬೇಕಾದವರು ಪ್ರಯಾಣಿಕರು. ಇದೊಂಥರಾ ಸಿಗರೇಟು ಪ್ಯಾಕ್‌ ಹಾಗೂ ಮದ್ಯದ ಬಾಟಲಿ ಮೇಲೆ ‘ಎಚ್ಚರಿಕೆ’ ಎಂದು ಬರೆದು ಮಾರಾಟಕ್ಕಿಟ್ಟಂತೆ! ಹೀಗಾಗಿ, ಜನ ಎಲ್ಲಿಗಾದರೂ ಹೋಗಲಿ, ನಿಯಮ ಪಾಲಿಸುವುದನ್ನು ಮಾತ್ರ ಮರೆಯಬಾರದು.

-ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT