ADVERTISEMENT

ಪ್ರೇರಣೆಗೆ ಬಗ್ಗದವರಿಗೆ ವಿನೂತನ ಮಾರ್ಗ

ವಿಜಯ್ ಹೆಮ್ಮಿಗೆ
Published 18 ಮಾರ್ಚ್ 2019, 20:15 IST
Last Updated 18 ಮಾರ್ಚ್ 2019, 20:15 IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ನೀಡುವ ಟಿಕೆಟ್ ಮೇಲೆ ‘ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆಯೇ? ಪರಿಷ್ಕೃತ ಪಟ್ಟಿ ಪರಿಶೀಲಿಸಿ’ ಎಂದು ಮುದ್ರಿಸಲಾಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಸಂಸ್ಥೆಯ ಈ ಅಭಿಯಾನ ಸ್ತುತ್ಯರ್ಹ.

ಎಷ್ಟೇ ಪ್ರೇರಣೆ ಕೊಟ್ಟರೂ ಕೆಲವರು ಮತದಾನದ ಪ್ರಕ್ರಿಯೆಯಿಂದ ಹೊರಗೇ ಉಳಿದುಬಿಡುತ್ತಾರೆ. ಅಂತಹವರನ್ನು ಬಡಿದೆಬ್ಬಿಸಲು ನಂದಿನಿ ಹಾಲಿನ ಕವರ್‌, ರೈಲ್ವೆ ಟಿಕೆಟ್‌, ವಿದ್ಯುತ್ ಬಿಲ್‌, ನೀರಿನ ಬಿಲ್, ಗ್ಯಾಸ್ ಬಿಲ್‍ಗಳ ಮೇಲೂ ಇಂತಹ ವಾಕ್ಯಗಳನ್ನು ಮುದ್ರಿಸಿದಲ್ಲಿ, ವಿನೂತನ ರೀತಿಯಲ್ಲಿ ಮತದಾನದ ಅರಿವು ಮೂಡಿಸಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT