ಕಾವೇರಿ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು, ಜಿಲ್ಲೆಗಳಲ್ಲಿರುವ ಕೆರೆಗಳಿಗೆ ಈ ಬಾರಿ ಇನ್ನೂ ನೀರನ್ನು ತುಂಬಿಸಿಲ್ಲ. ಪ್ರತಿದಿನವೂ ಸಾವಿರಾರು ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದ್ದರೂ ಇಲ್ಲಿನ ಕೆರೆಗಳ ಒಡಲು ತುಂಬಿಲ್ಲ. ನದಿಯಲ್ಲಿ ಹರಿದುಹೋಗುವ ನೀರು ಸಹ ಯಾವುದೇ ಉಪಯೋಗವಿಲ್ಲದೆ ಸಮುದ್ರದ ಪಾಲಾಗುತ್ತಿದೆ.
ಮಳವಳ್ಳಿ, ಕೆ.ಆರ್. ಪೇಟೆ, ಅರಸೀಕೆರೆ, ತಿಪಟೂರು, ತುಮಕೂರು, ಸಿರಾ ಮತ್ತಿತರ ಭಾಗಗಳ ರೈತರು ಬರದಿಂದ ಕಂಗಾಲಾಗುತ್ತಿದ್ದಾರೆ. ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಇತ್ತ ಗಮನಹರಿಸಿ ತುರ್ತಾಗಿ ಕೆರೆಗಳಿಗೆ ನೀರು ತುಂಬಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಆರ್. ಚಂದ್ರಶೇಖರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.