ADVERTISEMENT

ತೆರೆದ ಪುಸ್ತಕದ ಬದುಕು ಮಾದರಿಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST

ಗಾಂಧಿ ಜಯಂತಿಯಂದು ಬೆಳಗಿನಿಂದ ಸಂಜೆಯವರೆಗೆ ಗಾಂಧಿಯುಗದ ಬಾಳು, ಬದುಕು, ಸ್ವಾತಂತ್ರ್ಯ ಸಂಗ್ರಾಮ, ದಾಸ್ಯ ವಿಮುಕ್ತಿ... ಅಬ್ಬಾ, ಮಾಧ್ಯಮಗಳಿಂದ ತಿಳಿದ ಆ ಮಹನೀಯನ ಬದುಕು ತೆರೆದ ಪುಸ್ತಕದಂತೆ ಗೋಚರಿಸಿತು. ನದಿ ತೀರದಲ್ಲಿ ನಿರ್ಗತಿಕ ಮಹಿಳೆಗೆ ತನ್ನ ವಸ್ತ್ರ ದಾನ ಮಾಡಿ, ಮುಂದೆಂದೂ ಮೈತುಂಬ ಬಟ್ಟೆ ತೊಡಲಿಲ್ಲ. ಯಾವಾಗಲೂ ಮೂರನೇ ದರ್ಜೆ ರೈಲು ಪ್ರಯಾಣ, ಸಮಯ ಪ್ರಜ್ಞೆಗೆ ಬಾರದ ಸೈಕಲ್ ಸವಾರಿ ಒಂದೇ, ಎರಡೇ...

ಅಂದು ಗಾಂಧೀಜಿ ಕುರಿತು ಪ್ರಧಾನಿ ಮಾಡಿದ ನಿರರ್ಗಳ ಭಾಷಣ ಜನರನ್ನು ಮಂತ್ರಮುಗ್ಧಗೊಳಿಸಿತು. ಆದರೆ ನಡೆಯಲ್ಲಿ ಮಾತ್ರ ನಮ್ಮ ಜನಪ್ರತಿನಿಧಿಗಳು ಗಾಂಧೀಜಿ ಅವರ ಮಾರ್ಗ ಅನುಸರಿಸುವ ಮನಸ್ಸು ಮಾಡುತ್ತಿಲ್ಲ ಎಂಬುದಕ್ಕೆ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರ ಬಳಕೆಗೆ ಮೀಸಲಾದ, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸುವಂತಹ ರೀತಿಯ ಬೋಯಿಂಗ್‌ 777 ವಿಮಾನವೇ ಸಾಕ್ಷಿ. ವಿಮಾನದ ಖರೀದಿ ಮತ್ತು ಅಗತ್ಯಕ್ಕೆ ತಕ್ಕಂತೆ ಅದರ ಮಾರ್ಪಾಟಿಗಾಗಿ ಸರ್ಕಾರಕ್ಕೆ ತಗುಲಿರುವ ವೆಚ್ಚ ಕೋಟ್ಯಂತರ ರೂಪಾಯಿ. ದೇಶದಲ್ಲಿ ನಿರುದ್ಯೋಗ ಕಾಡುತ್ತಿದೆ. ಕೆಲವೆಡೆ ಭೀಕರ ಮಳೆಯಿಂದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಕೊರೊನಾ ಸೋಂಕಿನ ಆತಂಕದಲ್ಲಿ ಜನ ದಿನದೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ದುಂದುವೆಚ್ಚ ಬೇಕಿತ್ತೇ?

- ಎಂ.ಮೃತ್ಯುಂಜಯಪ್ಪ,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.