ADVERTISEMENT

ಸರಳ ನಡೆ ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST

ತಮ್ಮ ನೆಚ್ಚಿನ ಪ್ರಾಧ್ಯಾಪಕರಾದ ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲಡಾ. ಕೆ.ಸದಾಶಿವ ಶೆಟ್ಟಿ ಅವರಿಗೆ ಜನ್ಮದಿನದ ಪ್ರಯುಕ್ತ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ‘ರಾಯಲ್ ಟ್ರೀಟ್’ ನೀಡಿ ಗಮನ ಸೆಳೆದಿದೆ (ಪ್ರ.ವಾ., ಜುಲೈ 11). ಶೆಟ್ಟಿ ಅವರ ಜನ್ಮದಿನವನ್ನುಅವರ ಅಪಾರ ಶಿಷ್ಯ ಬಳಗವು ದೇಶ– ವಿದೇಶಗಳಿಂದ ಬೆಂಗಳೂರಿಗೆ ಬಂದು ಐಷಾರಾಮಿಯಾಗಿ ಆಚರಿಸಿ ಸಂಭ್ರಮಿಸಿದೆ.

ಇದು ಇತರರೂ ಜನ್ಮದಿನವನ್ನು ಐಷಾರಾಮಿಯಾಗಿ ಆಚರಿಸಲು ಪ್ರೇರಣೆ ನೀಡುವಂತಿದೆ. ಶಿಷ್ಯವರ್ಗವು ಯಾವುದಾದರೊಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು, ಒಂದು ವಾರ ಅಲ್ಲಿ ದಂತ ತಪಾಸಣಾ ಶಿಬಿರ ಏರ್ಪಡಿಸಿ, ಉಚಿತ ಚಿಕಿತ್ಸೆ ನೀಡುವ ಮೂಲಕವೂ ಗುರುಭಕ್ತಿ ತೋರಬಹುದಿತ್ತು. ಇದರಿಂದ ಅವರ ಗುರುಗಳಿಗೆ ಅಪರಿಮಿತ ಆನಂದ ಸಿಗುತ್ತಿತ್ತೇನೋ. ಸರಳ ನಡೆ ಎಂದೆಂದಿಗೂ ಅನುಕರಣೀಯ. ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT